ಹೊನ್ನಾವರ: ತಾಲೂಕಾ ಟ್ರಾಲರ್ ಬೋಟ್ ಸಂಘಟನೆ ಕಳೆದ ಮೀನುಗಾರಿಕಾ ವರ್ಷದಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವಾಗ ಸಮುದ್ರಕ್ಕೆ ಬಿದ್ದು ಮೃತಪಟ್ಟ ಸಂಘಟನೆಯ ಸದಸ್ಯರ ಪತ್ನಿಯರಿಗೆ ಸಂಘಟನೆಯ ಪರವಾಗಿ ಪರಿಹಾರ ಚೆಕ್ನ್ನು ಮಂಗಳವಾಗ ವಿತರಿಸಿದರು.
ಕಳೆದ ವರ್ಷ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಕುಮಟಾ ತಾಲೂಕಿನ ಕಲ್ಲಬ್ಬೆಯ ಗೋಪಾಲ ಗೌಡ ಪರವಾಗಿ ಅವರ ಪತ್ನಿ ರಾಧಾ ಗೋಪಾಲ ಗೌಡ ಹಾಗೂ ಕುಮಟಾ ತಾಲೂಕಿನ ಹಿಣಿ ಗ್ರಾಮದ ಮೃತ ಮೀನುಗಾರ ರತ್ನಾಕರ ದುರ್ಗಾ ಹರಿಕಂತ್ರ ಪರವಾಗಿ ಅವರ ಪತ್ನಿ ಸಾವಿತ್ರಿ ರತ್ನಾಕರ ಹರಿಕಂತ್ರ ಪರಿಹಾರ ಚೆಕ್ನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ರಾಮಚಂದ್ರ್ರ ದುರ್ಗು ಹರಿಕಂತ್ರ, ಅಚ್ಚಾ ಸಾಬ, ದೇವೇಂದ್ರ ಹಾಗೂ ಟ್ರಾಲರ್ ಬೋಟ್ ಸಂಘದ ಸದಸ್ಯರು ಉಪಸ್ಥಿತರಿದ್ದರು.
More Stories
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ
ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ‘ಶರಾವತಿ ಕುಂಭ’-‘ಶರಾವತಿ ಆರತಿ’