ಹೊನ್ನಾವರ: ಅಮೃತಮಹೋತ್ಸವದ ಪ್ರಯುಕ್ತ ಮಂಕಿಯ ಸೇವಾನಿರತ ಮತ್ತು ನಿವೃತ್ತ ಸೈನಿಕರ ತಂಡ “ಸಂಗ್ರಾಮದಿAದ 75 ರ ಸಂಭ್ರಮದೆಡೆಗೆ” ಎಂಬ ಅಪ್ಪಟ ದೇಶಪ್ರೇಮ ಸಾರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಅದರ ಅಂಗವಾಗಿ ಶಿಸ್ತುಬದ್ಧ ಬೈಕ್ ರ್ಯಾ ಲಿಯ ಮೂಲಕ ತಾಯಿ ಭಾರತಾಂಬೆಯ ಜೈಕಾರದೊಂದಿಗೆ ಮಂಕಿಯ ಪಟ್ಟಣ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ತೆರಳಿ ದೇಶದ ಮುಂದಿನ ಭವಿಷ್ಯ ವಾಗಿರುವ ಮಕ್ಕಳಿಗೆ ಸಿಹಿಹಂಚಿ ಅವರಲ್ಲಿ ರಾಷ್ಟ್ರಭಕ್ತಿಯ ಕುರಿತು, ಭಾರತೀಯ ಸೇನೆಯ ಕುರಿತು ಜಾಗೃತಿ ಮೂಡಿಸಲಾಯಿತು.ಈ ಸ್ವಾತಂತ್ರ್ಯದ ಕುರಿತಾದ ಕಾರ್ಯಕ್ರಮಕ್ಕೆ ದಾರಿಯೂದ್ದಕ್ಕೂ ನೆರೆದ ಊರ ನಾಗರಿಕರು ಅದ್ಭುತ ಸ್ವಾಗತ ಕೋರಿದರು..
ಸೈನಿಕರಾದ ಉಲ್ಲಾಸ್ ನಾಯ್ಕ, ರಾಜು ನಾಯ್ಕ, ಗಣೇಶ ನಾಯ್ಕ, ನಾಗರಾಜ್ ನಾಯ್ಕ, ಅರುಣ್ ನಾಯ್ಕ, ದೇವಪ್ಪ ನಾಯ್ಕ,ಸತೀಶ್ ನಾಯ್ಕ,ನೀರಜ್ ನಾಯ್ಕ ಮತ್ತು ಪೋಲಿಸರಾದ ಸುಧಾಕರ ನಾಯ್ಕ ,ಸ್ವಾತಂತ್ರ್ಯ ಹೋರಾಟಗಾರರು,ಶಿಕ್ಷಕರು,ಹಿರಿಯರು,ಊರ ನಾಗರಿಕರು ಉಪಸ್ಥಿತರಿದ್ದರು.
More Stories
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ
ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ‘ಶರಾವತಿ ಕುಂಭ’-‘ಶರಾವತಿ ಆರತಿ’