
ಹೊನ್ನಾವರ: ಬುಧವಾರ ಎಸ್ .ಡಿ. ಎಮ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಖಜಾಂಚಿಗಳಾದ ಉಮೇಶ್ ನಾಯ್ಕ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾರಾಯಣ ಯಾಜಿ ಸಾಲೇಬೈಲ ಅವರು ಮಾತನಾಡಿ — ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸತತ ಪರಿಶ್ರಮ ಪಡಬೇಕೆಂದು ಪ್ರೇರಣಾ ನುಡಿಗಳನ್ನಾಡಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ವಿಜಯಲಕ್ಷ್ಮಿ ನಾಯ್ಕ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಎಂ .ಹೆಚ್ ಭಟ್ ಅವರು ವಿದ್ಯಾರ್ಥಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನೆನಪಿಸಿಕೊಟ್ಟರು. ವಿದ್ಯಾರ್ಥಿ ಒಕ್ಕೂಟದ ಸಲಹೆಗಾರರಾದ ಶ್ರೀ ವಿನಾಯಕ ಭಟ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಉಪನ್ಯಾಸಕರಾದ ಎಂ. ಎನ್ ಅಡಿಗುಂಡಿಯವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿನಿ ಅನನ್ಯ ಮೇಸ್ತ ಸ್ವಾಗತಿಸಿದರು. ಕು. ನೀರಜ್ ಹೆಗಡೆ ವಂದಿಸಿದರು. ವಿದ್ಯಾರ್ಥಿನಿಯರಾದ ನಾಗಶ್ರೀ ಎಂ. ಭಟ್ ಮತ್ತು ಅನಾದ್ಯ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

More Stories
ಪೋಟೋಗ್ರಾಪರ್ಸ ಮತ್ತು ವಿಡಿಯೋಗ್ರಾಪರ್ಸ ಅಸೋಸಿಯೇಶನ್ 17 ನೇ ವರ್ಷದ ವಾರ್ಷಿಕೊತ್ಸವ
ಭಾರೀ ಗಾತ್ರದ ಮೀನಿನ ಕಳೆಬರಹ
ನಿವೃತ್ತ ಶಿಕ್ಷಕರು ಕಲಾವಿದರಾದ ಬಿ.ವಿ ಭಂಡಾರಿ ಕೆರೆಕೋಣ ನಿಧನ