April 24, 2024

Bhavana Tv

Its Your Channel

ಹೊನ್ನಾವರ ಬ್ಲಾಕ್ ಕಾಂಗ್ರೆಸ್‌ನಿoದ ಗಾಂಧೀ ಮತ್ತು ಶಾಸ್ತ್ರಿ ಜಯಂತಿ ಆಚರಣೆ

ಮಹತ್ಮಾ ಗಾಂಧೀ ಮತ್ತು ಶಾಸ್ತಿçÃಯವರ ತತ್ವಾದರ್ಶಗಳನ್ನು ದೇಶ ಎಂದೆAದಿಗೂ ಮರೆಯದು – ಜಗದೀಪ್ ತೆಂಗೇರಿ

ಹೊನ್ನಾವರ : ದೇಶದ ಸ್ವಾತಂತ್ರö್ಯ ಹೋರಾಟದ ಪಿತಾಮಹ ಮಹಾತ್ಮಾ ಗಾಂಧೀ ಮತ್ತು ಅತ್ಯಂತ ಸರಳ ವ್ಯಕ್ತಿತ್ವದ, ಭಾರತದ ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿಯವರ ತತ್ವಾದರ್ಶಗಳನ್ನು ರಾಷೃದ ಜನತೆ ಎಂದೆAದಿಗೂ ಮರೆಯಲಾರರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ನುಡಿದರು.

ಅವರು ಇಂದು ಹೊನ್ನಾವರ ಬ್ಲಾಕ ಕಾಂಗ್ರೆಸ್ ಸಮಿತಿ ನಗರದ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಹಾತ್ಮಾ ಗಾಂಧೀಯವರ 153ನೇ ಜಯಂತಿ ಮತ್ತು ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತಿçÃಯವರ 120ನೇ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡುತ್ತಿದ್ದರು.

ಮಹಾತ್ಮಾ ಗಾಂಧೀಯವರು ತನ್ನೆಲ್ಲಾ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ, ಯಾವುದೇ ಆಧಿಕಾರದ ಆಸೆ ಇಲ್ಲದೇ, ದೇಶದ ಜನರ ಉಜ್ವಲ ಭವಿಷ್ಯಕ್ಕಾಗಿ, ಬ್ರಿಟಿಷರ ವಿರುಧ್ದ ಹಗಲು-ರಾತ್ರಿಯೆನ್ನದೇ ಅಹಿಂಸಾ ಮಾರ್ಗದಿಂದ ಹೋರಾಡಿದರು. ಭಾರತವನ್ನು ಬ್ರಿಟಿಷರ ಕಪಿ ಮುಷ್ಟಿಯಿಂದ ಮುಕ್ತ ಮಾಡಿ, ಭಾರತಕ್ಕೆ ಸ್ವಾತಂತ್ರö್ಯ ತಂದು ಕೊಟ್ಟ ಶ್ರೇಯಸ್ಸು ಮಹಾತ್ಮಾ ಗಾಂಧೀಯವರಿಗೆ ಸಲ್ಲುತ್ತದೆ ಎಂದು ಜಗದೀಪ್ ಎನ್ ತೆಂಗೇರಿ ಹರ್ಷ ವ್ಯಕ್ತಪಡಿಸಿದರು.

ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಅಸಹಕಾರ ಚಳುವಳಿ, ಚಲೇಜಾವ್ ಚಳುವಳಿ, ಉಪ್ಪಿನ ಸತ್ಯಾಗ್ರಹ ಹೀಗೆ ಹಲವಾರು ಚಳುವಳಿ ನಡೆಸಿ, ಪ್ರಪಂಚಕ್ಕೆ ಶಾಂತಿ ಭೋಧಿಸಿದ, ಶಾಂತಿ ಧೂತ ಮಹಾತ್ಮಾ ಗಾಂಧೀಯವರನ್ನು ಕೊಂದ ನಾಥುರಾಮ್ ಗೋಡ್ಸೆಯಂತವರ ಅಭಿಮಾನಿ ಸಂಘಗಳು ಇಂದು ಹುಟ್ಟಿಕೊಳ್ಳುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಜಗದೀಪ ತೆಂಗೇರಿ ಖೇದ ವ್ಯಕ್ತಪಡಿಸಿದರು.

ಅವರಂತೆ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಕೂಡ ಎಂದು ಅಧಿಕಾರಕ್ಕಾಗಿ ಆಸೆ ಪಟ್ಟಿರಲಿಲ್ಲ. ದೇಶಕ್ಕಾಗಿ ತನು ಮನ ಧನವನ್ನು ಸಮರ್ಪಿಸಿದ್ದರು. ತಂದೆ-ತಾಯಿ ಹೇಳಿದ ನೀತಿ ಪಾಠಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದ ದೇವ ಸ್ವರೂಪಿ ನಮ್ಮ ಲಾಲ್‌ಬಹದ್ದೂರ್ ಶಾಸ್ತಿçà ಎಂದು ತೆಂಗೇರಿ ಗುಣಗಾನ ಮಾಡಿದರು. ಶಾಸ್ತಿçÃಯವರ “ಜೈ ಜವಾನ, ಜೈ ಕಿಸಾನ್” ಅನ್ನೊ ಸಂದೇಶ ಇಂದಿಗೂ ಜನಜನಿತವಾಗಿದೆ ಎಂದರು. ಅವರ ತತ್ವ, ಆದರ್ಶಗಳು ಎಂದೆAದಿಗೂ ಅಜರಾಮರ ಎಂದರು.

ಸಭೆ ಆರಂಭಕ್ಕೂ ಮುನ್ನ ಪಕ್ಷದ ಕಾರ್ಯಕರ್ತರು ಈ ಎರಡು ಮಹಾನ್ ಚೇತನಕ್ಕೆ ಮೌನಾಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ನಂತರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕರ್ತರು ಗೌರವ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಜಿಲ್ಲಾ ಕಾಂಗೇಸ್ ಸೇವಾದಳದÀ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಇಂಟೆಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೇಶವ ಮೇಸ್ತ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಝಕ್ರಿಯ್ಯಾ ಶೇಖ್, ಶಕ್ತಿ ಸಂಚಾಲಕ ಬಾಲಚಂದ್ರ ನಾಯ್ಕ, ಸೇವಾದಳದ ಅಧ್ಯಕ್ಷ ಮೋಹನ ಆಚಾರಿ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಪಾರೂಕ್ ಶೇಖ್, ಮಾದೇವ ನಾಯ್ಕ, ಕರ್ಕಿ, ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಮಾರ್ಷಲ್ ಡಿಸೋಜಾ, ನವಿನ್ ಡಿಸೊಜಾ, ಮನ್ಸೂರ್ ಶೇಖ್, ಹನೀಫ್ ಶೇಖ್, ಹಿಂದುಳಿದ ವರ್ಗ ವಿಭಾಗದ ಕಾರ್ಯದರ್ಶಿ ಸುರೇಶ ಮೇಸ್ತ, ಮದನರಾಜ್, ಜೊಸ್ಟನ್ ಡಿಸೋಜಾ, ಮೋಹನ ನಾಯ್ಕ, ಪಾತ್ರೊನ್ ಪರ್ನಾಂಡಿಸ್, ಜೋನ್ ರೊಡ್ರಗಿಸ್, ಮಾರ್ವಿನ್ ಗೊನ್ಸಾಲ್ವಿಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

error: