March 29, 2024

Bhavana Tv

Its Your Channel

ಹೊನ್ನಾವರ ಕರ್ನಾಟಕ ಸಂಘದಿoದ ಕಡಲ ತೀರದ ಕನ್ನಡ ಹಬ್ಬ

ಹೊನ್ನಾವರ: 67ನೇಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸಂಘ ಹಾಗೂ ಶ್ರೀಮಾತಾ ಪ್ರಕಾಶನ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ಒಂದರAದು ಹೊನ್ನಾವರದ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್. ಹೆಗಡೆ ಸಭಾ ಭವನದಲ್ಲಿ `ಕಡಲ ತೀರದ ಕನ್ನಡ ಹಬ್ಬ’ ಎಂಬ ವಿಶೇಷ ಕರ‍್ಯಕ್ರಮವನ್ನು ಸಂಘಟಿಸಲಾಗಿತ್ತು.

ಪ್ರೊ. ಎಂ. ನಾರಾಯಣ ಭಟ್ಟ ಅವರ ಕವನ ಸಂಕಲನ ಕಾರ್ತಿಕ ಕಳೆದ ಮೇಲೆ' ಕೃತಿ ಬಿಡುಗಡೆ, ಕನ್ನಡ ಹಾಡು ಹಾಗೂ ವಿಶೇಷ ಉಪನ್ಯಾಸ ಮೊದಲ ಅವಧಿಯಲ್ಲಿ ನಡೆಯಿತು. ಕೃತಿ ಬಿಡುಗಡೆ ಮಾಡಿದ ಜಿ. ಯು, ಭಟ್ಟ ಅವರು ಮಾತನಾಡುತ್ತಕೋಟಿಕಂಠ ಗಾಯನ, ಕೋಟಿ ಸೊಂಟ ನರ್ತನದಂಥ ಕರ‍್ಯಕ್ರಮಕ್ಕಿಂತ ವಿಭಿನ್ನ ರೀತಿಯ ಅರ್ಥಪೂರ್ಣ ಕರ‍್ಯಕ್ರಮಗಳನ್ನು ಕನ್ನಡದ ಉಳಿವಿಗಾಗಿ ಸಂಘಟಿಸಬೇಕಾಗಿದೆ. ನಾರಾಯಣ ಭಟ್ಟರ ವೈವಿಧ್ಯಮಯ ಸದಭಿರುಚಿಯ ಹವ್ಯಾಸ ಜೀವನೋತ್ಸಾಹ ಕನ್ನಡಿಗರಿಗೆ ಮಾದರಿಯಾದದ್ದು, ಕರ್ನಾಟಕ ಸಂಘ ಹಿರಿಯರ ಸಲಹೆ, ಕಿರಿಯರ ಕ್ರಿಯಾಶೀಲತೆಯೊಂದಿಗೆ ಮುಂದುವರಿಯಲಿ ಎಂದು ಹೇಳಿದರು.

ಹೊನ್ನಾವರದ ಐತಿಹಾಸಿಕ ಚಹರೆಗಳು' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಸುರೇಶ್ ತಾಂಡೇಲ ಅವರುಹೊನ್ನಾವರದ ಪ್ರಾಚೀನ ಕಾಲದ ಕುರಿತು ಶಾಸನ, ಕೈಪಿಯತ್ತುಗಳನ್ನು ಉಲ್ಲೇಖಿಸುತ್ತ ಚಾರಿತ್ರಿಕ ಮಹತ್ವವನ್ನು ಉಲ್ಲೇಖಿಸಿದರು. ಪ್ರಮುಖ ರಾಜರ, ಅರಸಮನೆತನಗಳ ಸಾಮಂತರ ಆಳ್ವಿಕೆಯ ಸಂಗತಿಗಳನ್ನು ಉಲ್ಲೇಖಿಸುತ್ತ ಜಗತ್ತಿನ ಚರಿತ್ರೆಯಲ್ಲಿ ಅರ್ಧ ಶತಮಾನಗಳಿಗಿಂತ ಹೆಚ್ಚುಕಾಲ ಹೊನ್ನಾವರ – ಭಟ್ಕಳವನ್ನು ಕೇಂದ್ರವಾಗಿಸಿಕೊAಡು ಆಳಿದ ಏಕೈಕ ರಾಣಿ ಚೆನ್ನಬೈರಾದೇವಿಯ ಸಾಧನೆಯನ್ನು ವಿವರಿಸಿದರು. ಹೊನ್ನಾವರದ ಬಂದರು ಜಗತ್ತಿನ ಜತೆಗೆ ಸಂಪರ್ಕ ಕಲ್ಪಿಸಿದ ಬಂದರುಗಳಲ್ಲಿ ಪ್ರಾಚೀನವಾದುದು.

ಯುವ ಸಂಗೀತ ಕಲಾವಿದೆ, ಉಪನ್ಯಾಸಕಿ ಕು. ಸಂಗೀತಾ ನಾಯ್ಕ ಅವರು ಕನ್ನಡದ ಸಾಹಿತ್ಯಿಕ ಸಾಂಸ್ಕೃತಿಕ ಪರಂಪರೆಯನ್ನು
ನೆನಪಿಸುವ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಬಿಡುಗಡೆಗೊಂಡ ಕೃತಿಯ ಕುರಿತು ಮಾತನಾಡುತ್ತ ಬೆಂಗಳೂರಿನ ಅಭಿನವ'ದ ನ. ರವಿಕುಮಾರ್ ಕಾರ್ತಿಕ ಕಳೆದ ಮೇಲೆಸಂಕಲನದ’ ಕವಿತೆಗಳು ವೈವಿಧ್ಯಮಯವಾದ ವಸ್ತು, ಸಾಮಾನ್ಯ ಸಂಗತಿ, ದೈನಂದಿನವಿದ್ಯಮಾನಗಳ ಕುರಿತಾಗಿನ ಸೂಕ್ಷ ್ಮ ಪ್ರತಿಕ್ರಿಯೆಯಿಂದ ಸೊಗಸಾಗಿ ಮೂಡಿಬಂದಿವೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ ಡಾ. ಎನ್. ಆರ್. ನಾಯಕ ಅವರು ಕನ್ನಡ ಅತ್ಯಂತ ಶ್ರೀಮಂತವಾದ ಭಾಷೆ, ಹಲವು ಕನ್ನಡಗಳಿಂದ ಪ್ರಾದೇಶಿಕ ಹಾಗೂ ಸಾಮಾಜಿಕ ಉಪಭಾಷೆಗಳಿಂದ ಇದು ಅಪಾರ ಪದಸಂಪತ್ತನ್ನು ಹೊಂದಿದೆ ಹಾಗೂ ಸಾಹಿತ್ಯಿಕ ಶ್ರೀಮಂತಿಕೆಯನ್ನು ಪಡೆದಿದೆ. ಇಂಥ ಭಾಷೆಯನ್ನು ಅದರೆಲ್ಲ ಸಮೃದ್ಧತೆಯೊಂದಿಗೆ ನಾವು ಮುನ್ನಡೆಸಬೇಕಾಗಿದೆ ಎಂದು ಹೇಳುತ್ತ ಸ್ನೇಹಿತ, ಸಹೋದ್ಯೋಗಿ ಎಂ. ನಾರಾಯಣ ಭಟ್ಟರ ಕಾವ್ಯದ ಸೊಗಸನ್ನು ಬಣ್ಣಿಸಿದರು.

ಹೊನ್ನಾವರದ ಕುರಿತು ವಿಶೇಷ ಉಪನ್ಯಾಸ ನೀಡಿದ ಸುರೇಶ್ ತಾಂಡೇಲರ ಅಧ್ಯಂiÄÀ ನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, ಶಾಸನ ಕೈಫಿಯತ್ತುಗಳ ಜೊತೆಗೆ ಚರಿತ್ರೆಯ ಸಂಗತಿಗಳನ್ನು ಗಮನಿಸುವಾಗ ಐತಿಹ್ಯ ಹಾಗೂ ವದಂತಿಗಳನ್ನು
ಪರಿಗಣಿಸಬೇಕೆಂದು ಅಭಿಪ್ರಾಯಪಟ್ಟರು.

ಆರಂಭದಲ್ಲಿ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕ ಮಾತುಗಳನ್ನಾಡಿ ಕರ್ನಾಟಕ ಸಂಘದ ಹಿನ್ನೆಲೆ, ಆಶಯಗಳ ಕುರಿತು ವಿವರಿಸಿ, ಎಲ್ಲರನ್ನೂ ಸ್ವಾಗತಿಸಿದರು. ಕು. ನಿಹಾರಿಕ ಭಟ್ಟ ಕನ್ನಡದಗೀತೆಯ ಮೂಲಕ ಕರ‍್ಯಕ್ರಮಕ್ಕೆ ಶುಭ ಚಾಲನೆ ನೀಡಿದರು. ಪ್ರಶಾಂತ ಹೆಗಡೆ ಮೂಡಲಮನೆ ಹಾಗೂ ವಿದ್ಯಾಧರ ನಾಯ್ಕ ಕಡತೋಕಾ ಕರ‍್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಪರವಾಗಿ ಪ್ರೊ. ಎಂ. ನಾರಾಯಣ ಭಟ್ಟ ದಂಪತಿಗಳನ್ನು ಡಾ. ಎನ್.ಆರ್. ನಾಯಕ, ಕೃಷ್ಣಮೂರ್ತಿ ಭಟ್ಟ ಶಿವಾನಿ, ಜಿ. ಯು. ಭಟ್ಟ ಹಾಗೂ ವೇದಿಕೆಯ ಗಣ್ಯರು ಸನ್ಮಾನಿಸಿದರು.

ಕವಿ. ಪ್ರೊ. ಎಂ. ನಾರಾಯಣ ಭಟ್ಟ ಸನ್ಮಾನಕ್ಕೆ ಪ್ರತಿಕ್ರಿಯಿಸಿ ತಾನು ರಚಿಸಿದ ಕವಿತೆ ಪ್ರಕಟಗೊಂಡು ಬಿಡುಗಡೆಗೊಂಡಿದೆ. ತನ್ನಲ್ಲಿರುವ ಅಪರೂಪದ ತತ್ವಗಳ, ಕಲಾಕೃತಿಗಳ ಸಂಗ್ರಹಗಳು ಮುಂದಿನ ತಲೆಮಾರಿಗೆ ಉಪಯುಕ್ತಗೊಳ್ಳುವಂತಾಗಬೇಕಿದೆ ಎಂದು ಹಂಬಲಿಸಿದರು.

.

error: