April 20, 2024

Bhavana Tv

Its Your Channel

ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಆಚರಣೆ

ಹೊನ್ನಾವರ:- ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರವತಿಯಿಂದ 67ನೇ ಕನ್ನಡ ರಾಜ್ಯೋತ್ಸವವನ್ನು ಹೊನ್ನಾವರ ಶರಾವತಿ ಸರ್ಕಲ್ ನಲ್ಲಿ ಕರವೇ ಅಧ್ಯಕ್ಷ ಶ್ರೀ ಮಂಜುನಾಥ ಗೌಡರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು
ಕಾರ್ಯಕ್ರಮವನ್ನು ಜಾನಪದ ಹಾಡಿನೊಂದಿಗೆ ಆರಂಭಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು ಮತ್ತು ಹಲವಾರು ಸಂಘಟನೆಗಳ ಪ್ರಮುಖರನ್ನು ಕನ್ನಡಪರ ಹೋರಾಟಗಾರರನ್ನು ಗೌರವಿಸಲಾಯಿತು ದಿನಾಂಕ 11-11-2022 ರಂದು ಲೋಕಾರ್ಪಣೆ ಗೊಳ್ಳುವ ನಾಡ ಪ್ರಭು ಕೆಂಪೇಗೌಡರ 108 ಅಡಿಗಳ ಭವ್ಯ ಕಂಚಿನ ಪ್ರತಿಮೆಯ ಕಿರುಚಿತ್ರ ಪ್ರದರ್ಶಿಸುವದರೊಂದಿಗೆ ಕನ್ನಡಾಂಬೆಗೆ ದೀಪ ಬೆಳಗಿ ಪುಷ್ಪ ನಮನ ಹಾಗೂ ಅದ್ದೂರಿ ಡಿಜೆ ಮೆರವಣಿಗೆಯೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ದಂಡಾಧಿಕಾರಿಗಳಾದ ನಾಗರಾಜ ನಾಯ್ಕಡ್ ಮತ್ತು ಕರವೇ ಜಿಲ್ಲಾಧ್ಯಕ್ಷರಾದ ಭಾಸ್ಕರ ಪಟಗಾರ, ಕಸಪ ಅಧ್ಯಕ್ಷ ಎಸ್ ಹೆಚ್ ಗೌಡ, ಶಿಕ್ಷಕ ಸಂಘದ ಅಧ್ಯಕ್ಷರಾದ ಎಮ್ ಜಿ ನಾಯ್ಕ, ಒಕ್ಕೂಟದ ಅಧ್ಯಕ್ಷ ರಾಜು ಮಾಸ್ತಿಹಳ್ಳ, ಅಯ್ಯಪ್ಪ ನಾಯ್ಕ, ಸುರೇಶ್ ನಾಯ್ಕ, ಸಚಿನ್ ನಾಯ್ಕ್, ಸುದೇಶ್ ನಾಯ್ಕ್ ಹಾಗೂ ಅನೇಕ ಗಣ್ಯರು ಕರವೇ ಸದಸ್ಯರು ಉಪಸ್ಥಿತರಿದ್ದರು..

error: