ಹೊನ್ನಾವರ “ಗ್ರಾಮಗಳ ಅಭಿವೃದ್ಧಿ ದೇಶದ ಅಭಿವೃದ್ದಿ ಹಳ್ಳಿಗಳತ್ತ ಶಾಸಕ ಸುನೀಲ ನಾಯ್ಕ ಚಿತ್ತ” ಎನ್ನುವ ಧೈಯದೊಂದಿಗೆ ವಿವಿಧ ಕಾಮಗಾರಿಗೆ ಅಡಿಗಲ್ಲು ಸಮಾರಂಭ ಮತ್ತು ಸಾರ್ವಜನಿಕ ಸನ್ಮಾನ ಕಾರ್ಯಕ್ರಮಕ್ಕೆ ಕುದ್ರಗಿ ಪ್ರಾಥಮಿಕ ಆರೊಗ್ಯ ಕೇಂದ್ರದ ಆವರದಲ್ಲಿ ಮಂಗಳವಾರ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು
ನಂತರ ಮಾತನಾಡಿ ಗೆಲ್ಲುವಾಗ ಬಿಜೆಪಿಯಿಂದ ಗೆದ್ದು, ಆಯ್ಕೆಯಾದ ಬಳಿಕ ಪಕ್ಷ ನೋಡದೇ ಅಭಿವೃದ್ದಿ ಕಾರ್ಯ ಮಾಡುವ ಮೂಲಕ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಿದ್ದೇನೆ. ಅಧಿಕಾರ ಇದ್ದಾಗ ನನ್ನ ಜನರಿಗೆ ಏನು ನೀಡಿದ್ದೇನೆ ಎನ್ನುವುದು ಮುಖ್ಯವಾಗಿದೆ. ಜನಸೇವಕನಾಗಿ ನಿಮ್ಮ ಸಂಕಷ್ಟ ಬಗೆಹರಿಸುವ ಕಾರ್ಯ ಮಾಡಲಾಗಿದೆ. ಮುಂದೆ ನಾನು ಚುನಾವಣೆ ನಿಂತು ಶಾಸಕನಾದರೆ ಒಂದೆ ವರ್ಷದಲ್ಲಿ ಈ ಭಾಗದಲ್ಲಿ ಸೇತುವೆ ನಿರ್ಮಾಣ ಮಾಡಿಸುತ್ತೇನೆ. ಇಂದು ನೀಡಿದ ಮನವಿಯನ್ನು ಮುಂದಿನ ದಿನದಲ್ಲಿ ಅನುಷ್ಠಾನಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಜೈವಂತ ಪ್ರಭು ಮಾತನಾಡಿ ಕುದ್ರಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ ತೀರಾ ಹದಗೆಟ್ಟಿತ್ತು. ಯಾರೆ ಅಧಿಕಾರ ನಡೆಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಬಹು ವರ್ಷದ ಬೇಡಿಕೆಯಾದ ವಿವಿಧ ಯೋಜನೆಗಳನ್ನು ಶಾಸಕ ಸುನೀಲ ನಾಯ್ಕ ಅವಧಿಯಲ್ಲಿ ನಡೆದಿದೆ. 4 ಕೋಟಿ ವೆಚ್ಚದ ಕಾಮಗಾರಿ ಶಾಸಕರ ಅನುದಾನದಿಂದ ಈಗಾಗಲೇ ನಡೆದಿದ್ದು, 2 ಕೋಟಿ ವೆಚ್ಚದ ಕಾರ್ಯ ಮುಂದಿನ ದಿನದಲ್ಲಿ ನಡೆಯುವ ಮೂಲಕ ಕುದ್ರಗಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ನಾವೆಲ್ಲರು ನಿಮ್ಮ ಜೊತೆ ಇರಲಿದ್ದೇವೆ. ನಿಮ್ಮ ವಿರುದ್ದ ಯಾರೆ ಷಡ್ಯಂತ ಮಾಡಿದರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ನಿಮ್ಮ ಗೆಲುವಿಗೆ ದೇವಾಲಯದ ಮಹದ್ವಾರ ನಿರ್ಮಾಣವೇ ಶ್ರೀರಕ್ಷೆಯಾಗಲಿದೆ ಎಂದರು.
ಗ್ರಾಮಸ್ಥರು, ವಿವಿಧ ಸಂಘಟನೆ ಹಾಗೂ ಸಾರ್ವಜನಿಕರು ಶಾಸಕರನ್ನು ಅಭಿಮಾನದಿಂದ ಸನ್ಮಾನಿಸಿ ಗೌರವಿಸಿದರು.
ಶ್ರೀಪಾದ ಗೌಡ ಮಾತನಾಡಿ 70 ವರ್ಷದಲ್ಲಿ ಕಾಣದ ಅಭಿವೃದ್ದಿ 5 ವರ್ಷದಲ್ಲಿ ಆಗಿದೆ. ಪಕ್ಷ ಧರ್ಮದ ತಾರತಮ್ಯ ಮಾಡದೇ ಅಭಿವೃದ್ದಿ ಕಾರ್ಯ ಮಾಡಿದ್ದಾರೆ ಎಂದರು
ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಮಂಜುನಾಥ ನಾಯ್ಕ, ಪ್ರಮೋದ ನಾಯ್ಕ, ಮಹೇಶ ನಾಯ್ಕ, ಬಿಜೆಪಿ ಮುಖಂಡರಾದ ಗಣಪತಿ ನಾಯ್ಕ ಬಿ.ಟಿ., ಮಾರುತಿ ನಾಯ್ಕ, ಪಕ್ಷದ ಪದಾಧಿಕಾರಿಗಳು, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು
More Stories
ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆ ಕೊನೆಯ ಹಂತದ ಕಾಮಗಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ ಆರೋಪ
ಮತದಾನ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮೀನುಗಾರರ ಮನವೊಲಿಸಲು ಪ್ರಯತ್ನಿಸಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್.
ಕಡತೋಕಾದಲ್ಲಿ ಸಂಪನ್ನಗೊAಡ ಯಕ್ಷರಂಗೋತ್ಸವ-24