ಹೊನ್ನಾವರ ತಾಲೂಕಿನ ಮಾಡಗೇರಿಯ ಶ್ರೀ ರಾಮಾನಾಥ ಸಭಾಭವನದಲ್ಲಿ ನಡೆಯುತ್ತಿರುವ ಮದ್ಯವರ್ಜನಾ ಶಿಬಿರದಲ್ಲಿ, ನರಸಿಂಹ ನಾಯ್ಕ್ ಹರಡಸೆಯವರ ಆಯ್ಕೆಯ ಕಲಾವಿದರಿಂದ ಭಜನಾ ಸೇವೆ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ 1626 ನೇ ಮದ್ಯವರ್ಜನಾ ಶಿಬಿರವು ತಾಲೂಕಿನ ಮಾಡಗೇರಿಯ ಶ್ರೀ ರಾಮಾನಾಥ ಸಭಾಭವನದಲ್ಲಿ ನಡೆಯುತ್ತಿದೆ. ಒಂದು ವಾರಗಳ ಕಾಲ ನಡೆಯುವ ಈ ಶಿಬಿರದಲ್ಲಿ ಸಂಜೆ ಭಜನಾ ಕಾರ್ಯಕ್ರಮವಿರುತ್ತದೆ. ಅದರಂತೆ ನಾಲ್ಕನೇ ದಿನ ಸಂಜೆ ನರಸಿಂಹ ನಾಯ್ಕ್ ಹರಡಸೆಯವರ ಆಯ್ಕೆಯ ಕಲಾವಿದರಿಂದ ಭಜನಾ ಸೇವೆ ನಡೆಯಿತು. ರಾಜ್ಯಪ್ರಶಸ್ತಿ ಪುರಸ್ಕೃತ ಮಾರುತಿ ನಾಯ್ಕ್ ಕೂಜಳ್ಳಿ, ರಸಮಂಜರಿ ಗಾಯಕ ಪ್ರಶಾಂತ್ ಗಾವಡಿ ಅಳ್ವೆಕೋಡಿ, ಭಾಸ್ಕರ ನಾಯ್ಕ್ ಹರಡಸೆ ಮತ್ತು ಮಂಜುನಾಥ್ ನಾಯ್ಕ್ ಬಳ್ಕೂರು ಹಾಡಿದರು. ಕಳೆದ ವಾರ “ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ” ಗೆ ಭಾಜನರಾದ ಬಳಿಕ ಕುಮಟಾ ವಿಜಯ ಮಹಲೆಯವರ ಪ್ರಥಮ ಕಾರ್ಯಕ್ರಮ ಇದಾಗಿದ್ದು, ಹಾರ್ಮೋನಿಯಂ ಸಾಥ್ ನೀಡುವ ಮೂಲಕ ಶ್ರೀ ಮಂಜುನಾಥನಿಗೆ ಕಲಾಸೇವೆ ಸಮರ್ಪಿಸಿದರು. ತಬಲಾದಲ್ಲಿ ಪ್ರದೀಪ್ ಭಂಡಾರಿ ಕೆರೆಕೋಣ ಅತ್ಯಮೋಘ ಕೈ ಚಳಕ ತೋರಿದರು. ಭಜನೆಗೆ ಪೂರಕವಾಗಿ ಶಿಬಿರಾರ್ಥಿಗಳು ಭಕ್ತಿಯಿಂದ ಕುಣಿದು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮದ್ಯವರ್ಜನಾ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ್ ಹಾಗೂ ಸದಸ್ಯರು, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ ಹಾಗೂ ಯೋಜನೆಯ ಸರ್ವರೂ ಉಪಸ್ಥಿತರಿದ್ದರು.
ವರದಿ: ನರಸಿಂಹ ನಾಯ್ಕ್ ಹರಡಸೆ
More Stories
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ
ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ‘ಶರಾವತಿ ಕುಂಭ’-‘ಶರಾವತಿ ಆರತಿ’