April 23, 2024

Bhavana Tv

Its Your Channel

ಡಿಸೆಂಬರ ೧೦ರಿಂದ ೧೬ವರೆಗೆ ಉತ್ತರ ಕನ್ನಡ ರಾಮಕ್ಷತ್ರೀಯ ಸಮಾಜ ಭಾಂದವರಿಗಾಗಿ ಶ್ರೀ ರಾಮತಾರಕ ಜಪಾನುಷ್ಠಾನ

ಹೊನ್ನಾವರ; ಶ್ರೀ ಸ್ವರ್ಣವಲ್ಲಿ ರಾಮಕ್ಷತ್ರೀಯ ಪರಿಷತ್ ಹೊನ್ನಾವರ ಇದರ ವತಿಯಿಂದ ಡಿಸೆಂಬರ ೧೦ರಿಂದ ೧೬ವರೆಗೆ ಉತ್ತರ ಕನ್ನಡ ರಾಮಕ್ಷತ್ರೀಯ ಸಮಾಜ ಭಾಂದವರಿಗಾಗಿ ಸ್ವರ್ಣವಲ್ಲಿ ಶ್ರೀಗಳ ಅನುಗ್ರಹ ಹಾಗೂ ಮಾರ್ಗದರ್ಶನಗಳೊಂದಿಗೆ ಶ್ರೀ ರಾಮತಾರಕ ಜಪಾನುಷ್ಠಾನ ನಡೆಯಲಿದೆ ಎಂದು ಪರಿಷತ್ ಸಹಾಯಕ ಕಾರ್ಯದರ್ಶಿ ಆನಂದು ನಾಯಕ್ ಚಂದಾವರ ತಿಳಿಸಿದರು . ಅವರು ಹೊನ್ನಾವರ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕರೆದ ಮಾಧ್ಯಮ ಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ರಾಮತಾರಕ ಜಪದ ಸಂಚಾಲಕ ಎಮ್ ಆರ್ ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಜೇಶ ಸಾಲೇಹಿತ್ತಲ, ಲಕ್ಷ್ಮೀ ನಾರಾಯಣ ದೇವಸ್ಥಾನದ ಅಧ್ಯಕ್ಷ ಮೋಹನ ನಾಯ್ಕ, ಮಿರ್ಜಾನ ಸಮಾಜದ ಅಧ್ಯಕ್ಷ ಶ್ರೀನಿವಾಸ ನಾಯ್ಕ ಮಾಹಿತಿ ನೀಡಿದರು.

error: