March 22, 2024

Bhavana Tv

Its Your Channel

ಶ್ರೀ ಪಿ. ಎನ್. ಭಟ್ಟ ಕಡ್ಲೆಇವರ ಬೀಳ್ಕೊಡುಗೆ ಸಮಾರಂಭ.

ಹೊನ್ನಾವರ ; ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ., ಹೊನ್ನಾವರ ಇದರಲ್ಲಿ ದಿನಾಂಕ ೨೧.೦೩.೧೯೮೮ ರಂದು ವೃತ್ತಿ ಜೀವನ ಪ್ರಾರಂಭಿಸಿ ದಿನಾಂಕ ೦೧.೦೪.೨೦೦೬ ರಿಂದ ಪ್ರಧಾನ ವ್ಯವಸ್ಥಾಪಕರಾಗಿ ಒಟ್ಟೂ ೩೫ ವರ್ಷ ೨ ತಿಂಗಳು ಸುಧೀರ್ಘ ಸೇವೆ ಸಲ್ಲಿಸುವುದರೊಂದಿಗೆ, ಕುಮಟಾ ಪಿಕಾರ್ಡ ಬ್ಯಾಂಕಿನಲ್ಲಿ ೧ ವರ್ಷ ೬ ತಿಂಗಳುಗಳ ಕಾಲ ಪ್ರಭಾರ ವ್ಯವಸ್ಥಾಪಕನಾಗಿ (ಹೊನ್ನಾವರ ಚಾರ್ಜ ಕುಮಟಾ ಪ್ರಭಾರ) ಎರಡು ಕಡೆ ಕೆಲಸ ಮಾಡಿ ದಿನಾಂಕ ೩೧.೦೫.೨೦೨೩ ರಂದು ಸೇವೆಯಿಂದ ನಿವೃತ್ತಿ ಹೊಂದಿದ್ದು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಿ. ಎನ್. ಭಟ್ಟ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪಿ. ಎನ್. ಭಟ್ಟ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. 
೩೫ ವರ್ಷಗಳ ಆಡಳಿತ ಅವಧಿಯಲ್ಲಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶೃಮಿಸುವುದರ ಜೊತೆಗೆ ತಾಲೂಕಿನಲ್ಲಿ ಮೂರು ಶಾಖೆಗಳನ್ನು ತೆರೆದು ಉತ್ತಮ ವ್ಯವಹಾರ ನಡೆಸುತ್ತಿರುವುದು ಮತ್ತು ಇವರ ಅವಧಿಯಲ್ಲಿ ಬ್ಯಾಂಕಿಗೆ ಹಲವಾರು ಪ್ರಶಸ್ತಿಗಳು ಬಂದಿರುವುದು ಮತ್ತು ಇವರ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತ ನಡೆಸಿರುದನ್ನು ಸ್ಮರಿಸಲಾಯಿತು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ವಿ. ಎನ್. ಭಟ್ಟ, ಉಪಾಧ್ಯಕ್ಷರಾದ ಶ್ರೀ ರಾಘವೇಂದ್ರ ನಾಯ್ಕ, ಮಾಜಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಗೌಡ, ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಶ್ರೀ ಯೋಗೇಶ ರಾಯ್ಕರ, ನಿದೇಶಕರುಗಳಾದ ಶ್ರೀ ಕೃಷ್ಣ ಗೌಡ, ಶ್ರೀ ಶಿವರಾಮ ಸಂಗೂಮನೆ, ಶ್ರೀ ಗೋವಿಂದ ನಾಯ್ಕ, ಶ್ರೀ ರಾಜು ನಾಯ್ಕ, ಶ್ರೀ ವಿ. ಕೆ. ವಿಶಾಲ್, ನಿವೃತ್ತ ವ್ಯವಸ್ಥಾಪಕರಾದ ಶ್ರೀ ವಿ. ಪಿ. ಹೆಗಡೆ ಮತ್ತು ಕುಮಟಾ ಪಿ.ಎಲ್.ಡಿ.ಬ್ಯಾಂಕ ಅಧ್ಯಕ್ಷರಾದ ಶ್ರೀ ಭುವನ್ ಭಾಗ್ವತ, ಪ್ರಭಾರ ಪ್ರಧಾನ ವ್ಯವಸ್ಥಾಪಕರಾಗಿ ನಿಯೋಜನೆ ಗೊಂಡಿರುವ ಶ್ರೀ ಹನುಮಂತ ನಾಯ್ಕ ಮತ್ತು ಎನ್.ಐ.ಸಿ. ಡಿ.ಒ ಶ್ರೀ ದಿನೇಶ ಕಾಮತ್ ರವರು ಅಭಿನಂದನಾ ನುಡಿಗಳೊಂದಿಗೆ ನಿವೃತ್ತ ಪ್ರಧಾನ ವ್ಯವಸ್ಥಾಪಕರ ಕಾರ್ಯವೈಕರಿಯನ್ನು ಶ್ಲಾಘಿಸಿದರು, ನಿವೃತ್ತಿ ಹೊಂದುತ್ತಿರುವ ಶ್ರೀ ಪಿ. ಎನ್. ಭಟ್ಟ ರವರು ಮಾತನಾಡಿ ನನ್ನ ಅಧಿಕಾರಾವಧಿಯಲ್ಲಿ ಸಹಕಾರ ನೀಡಿದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ಗ್ರಾಹಕರಿಗೆ ಧನ್ಯವಾದ ಸಲ್ಲಿಸಿದರು ಜೊತೆಗೆ ಬ್ಯಾಂಕು ಮುಂದಿನ ದಿಗಳಲ್ಲಿ ಇನ್ನಷ್ಟು ಪ್ರಗತಿ ಹೊಂದಲಿ ಎಂದು ಹಾರೈಸಿದರು. ನಿರ್ದೇಶಕರುಗಳಾದ ಶ್ರೀ ವಜ್ರನಾಭ ಗೌಡ, ಶ್ರೀ ರಾಜೇಂದ್ರ ನಾಯ್ಕ, ಶ್ರೀ ರವಿ ಶೆಟ್ಟಿ, ಶ್ರೀಮತಿ ಬಾಗೀರಥಿ ಗೊಂಡ, ಶ್ರೀಮತಿ ವಾಸಂತಿ ನಾಯ್ಕ, ಶ್ರೀಮತಿ ಮಂಗಲಾ ಮೇಸ್ತ ಇವರು ಅಭಿನಂಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು, ಸಿಬ್ಬಂದಿಗಳಾದ ಶ್ರೀ ಬಾಲಚಂದ್ರ ಗೌಡ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು, ಶ್ರೀಮತಿ ಸಹನಾ ನಾಯ್ಕ ಮತ್ತು ನಯನಾ ನಾಯ್ಕ ಪ್ರಾರ್ಥನೆ ಸಲ್ಲಿಸದರು ಶ್ರೀ ಹರೀಶ ಮೊಗೆರ ರವರು ವಂದನಾರ್ಪಣೆ ಸಲ್ಲಿಸದರು. ಮಾಜಿ ಅಧ್ಯಕ್ಷರಾದ ಶ್ರೀ ಜಿ. ಜಿ. ಸಭಾಹಿತ, ಹಿರಿಯ ಪತ್ರಕರ್ತ ಶ್ರೀ ಕೃಷ್ಣಮೂರ್ತಿ ಹೆಬ್ಬಾರ ಕಾಸ್ಕಾರ್ಡ ಬ್ಯಾಂಕಿನ ಉ.ಕ. ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಎನ್ ರಘುನಾಥ್, ವಿವಿಧ ಸಹಕಾರಿ ಸಂಘ ಮತ್ತು ಬ್ಯಾಂಕುಗಳ ನಿರ್ಧೇಶಕರು ಮತ್ತು ನೌಕರರುಗಳು ಮತ್ತು ಬ್ಯಾಂಕಿನ ಗ್ರಾಹಕರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
error: