ಕಾರವಾರ: ಗೋವಾ ರಾಜ್ಯದಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ವಿವಿಧ ಬಗೆಯ 814 ಬಾಕ್ಸಗಳಲ್ಲಿದ್ದ ಸುಮಾರು 26,29,536/ಲಕ್ಷ-ರೂಪಾಯಿ ಮೌಲ್ಯದ 30,212 ಗೋವಾ ರಾಜ್ಯದ ಸರಾಯಿ ಬಾಟಲಗಳನ್ನು ಜಪ್ತಪಡಿಸಿಕೊಂಡು ಕಂಟೇನರ್ ಲಾರಿ ಸಮೇತ ಕಾರವಾರ ಪೋಲಿಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಘಟನೆ ಕಾರವಾರ ತಾಲೂಕಿನ ಬಿಣಗಾ ಬಳಿ ಸೋಮವಾರ ನಡೆದಿದೆ.
ಗೋವಾ ರಾಜ್ಯದಿಂದ ಅಂಕೋಲಾ ಮಾರ್ಗವಾಗಿ ಹೈದ್ರಾಬಾದ ಕಡೆಗೆ ಸಾಗಾಟ ಮಾಡಿಕೊಂಡು ಹೋಗುತ್ತಿದ್ದ ಕಾರವಾರ ತಾಲೂಕಿನ ಬಿಣಗಾ ಪೋಸ್ಟ ಆಫಿಸ್ ಎದುರಿನ ರಾಷ್ಟ್ರೀಯ ಹೆದ್ದಾರಿ 66 ಬಳಿಯಲ್ಲಿ ಕಂಟೇನರ್ ಲಾರಿ ಯೊಂದರಲ್ಲಿ ಸುಮಾರು 814 ಬಾಕ್ಸ್ ವಿವಿಧ ಬಗೆಯ ಸಾರಾಯಿ ಸಾಗಾಟ ಮಾಡುವಾಗ ಕಾರವಾರ ಪೋಲಿಸರ ಅಧಿಕಾರಿಗಳು ದಾಳಿ ನಡೆಸಿ ಕಂಟೇನರ್ ಸಮೇತ ವಶಪಡಿಸಿಕೊಂಡಿದ್ದು,ಚಾಲಕನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳಾದ ಸುಧಾಕರ ಅರ್ಜುನ ಗೊಲಾಂಡ, ಸಾ|| ಪಿಂಪ್ಲೇವಾಡಿ ಗ್ರಾಮ,ಹಾಗೂ ಬೀಡ ಜಿಲ್ಲೆಯ
ಮಹಾರಾಷ್ಟ್ರದ ಶಿರೂರ ತಾಲೂಕಿನ ರಕ್ಷಿಸ್ ಭೂವನ, ಇಬ್ಬರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿರುತ್ತಾರೆ.
ಪೊಲೀಸ್ ಅಧೀಕ್ಷಕರು ಕಾರವಾರ ಡಾ||ಸುಮನ ಪೇನ್ನೇಕರ, ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಎಸ್.ಬದರಿನಾಥ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಜಿಲ್ಲಾ ವಿಶೇಷ ವಿಭಾಗದ ಪಿ.ಎಸ್.ಐ ಪ್ರೇಮನಗೌಡ ಪಾಟೀಲ್,ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ ನಾಯ್ಕ, ಭಗವಾನ ಗಾಂವಕರ, ಸಂತೋಷಕುಮಾರ ಕೆ.ಚಿ,ಚಾಲಕ ಉಮೇಶ ಗಾಳ ಕಾರ್ಯಾಚರಣೆಯಲ್ಲಿ ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಡಾ. ಸುಮನ್ ಪೇನ್ನೇಕರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
More Stories
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಬಿಜೆಪಿಗರ ಆರೋಪ ಅಪ್ಪಟ ಸುಳ್ಳು: ಶಂಭು ಶೆಟ್ಟಿ
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಉರಿ ಬಿಸಿಲಲ್ಲೂ ಉತ್ಸಾಹ ಕಳೆದುಕೊಳ್ಳದ ಕಾಂಗ್ರೆಸ್ ಕಾರ್ಯಕರ್ತರು.ಭರ್ಜರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ಡಾ.ಅಂಜಲಿ ನಿಂಬಾಳ್ಕರ್.