ಕಾರವಾರದ ಹೆಸರಾಂತ ಹಿರಿಯ ರಂಗಕರ್ಮಿ, ನಾಟಕ ಕಲಾವಿದ, ನಿರ್ದೇಶಕ ಹಾಗೂ ಬರಹಗಾರ ಮಾರುತಿ ಬಾಡಕರ್ ಬುಧವಾರ ಸಂಜೆ ಹೃದಯಘಾತದಿಂದ ವಿಧಿವಶರಾದರು.
ಬಾಡಕರ್ ಅಗಲುವಿಕೆ ಅಸಂಖ್ಯಾತ ಕಲಾಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕವಿಗಳಾಗಿದ್ದ ಇವರು ಸುಂದರ ಸಾಮಾಜಿಕ ನಾಟಕ “ಸತ್ಯಮೇವಜಯತೇ, ಸೇಡಿನ ಜ್ವಾಲೆ, ನಟಸಾಮ್ರಾಟ, ಸ್ನೇಹಬಂಧನ, ತಾಳಿ ಕಟ್ಟಿದರೂ ಗಂಡನಲ್ಲ” ಮುಂತಾದ
ಅನೇಕ ಜನಪ್ರಿಯ ನಾಟಕಗಳನ್ನು ಬರೆದಿದ್ದರು. ಸ್ವತಃ ನಾಟಕ ಕಲಾವಿದ, ನಿರ್ದೇಶಕರಾಗಿಯೂ ರಂಗಸೇವೆ ಮಾಡಿದ್ದರು. ಸಾಮಾಜಿಕ ನಾಟಕಗಳ ಮೂಲಕ ಸ್ವಾರ್ಥಿ ಸಮಾಜವನ್ನು ಎಚ್ಚರಿಸುವ ಕತೆಗಳನ್ನು ಬರೆದು ನಾಟಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜಿಲ್ಲೆಯಾದ್ಯಂತ ಅಪಾರ ಜನಮೆಚ್ಚುಗೆಗೆ ಸಾಕ್ಷಿಯಾಗಿದ್ದರು. ಕಾರವಾರದಲ್ಲಿ ಕನ್ನಡ ಕಟ್ಟಿ ಬೆಳೆಸುವಲ್ಲಿ ಹಾಗೂ ರಂಗಭೂಮಿಗೆ ಮೆರಗು ತರುವಲ್ಲಿ ನಿರಂತರವಾಗಿ ಶೃಮಿಸಿದ್ದರು.
ಇಂತಹ ಹಿರಿಯ ಚೇತನವನ್ನು ಕಳೆದುಕೊಂಡ ಜಿಲ್ಲೆಯ ನಾಟಕರಂಗ ಈಗ ಬಡವಾಗಿದೆ ಎನ್ನಬಹುದು. ಶ್ರೀಯುತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಜಿಲ್ಲೆಯ ಕಲಾವಿದರು, ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ವರದಿ: ನರಸಿಂಹ ನಾಯ್ಕ್ ಹರಡಸೆ
More Stories
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಬಿಜೆಪಿಗರ ಆರೋಪ ಅಪ್ಪಟ ಸುಳ್ಳು: ಶಂಭು ಶೆಟ್ಟಿ
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಉರಿ ಬಿಸಿಲಲ್ಲೂ ಉತ್ಸಾಹ ಕಳೆದುಕೊಳ್ಳದ ಕಾಂಗ್ರೆಸ್ ಕಾರ್ಯಕರ್ತರು.ಭರ್ಜರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ಡಾ.ಅಂಜಲಿ ನಿಂಬಾಳ್ಕರ್.