ವರದಿ: ನಟರಾಜ ಗದ್ದೆಮನೆ, ಕುಮಟಾ
ಕುಮಟಾ ತಾಲೂಕಿನ ಹೊಲನಗದ್ದೆಯ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಸತತ ೩೦ನೇ ವರ್ಷ ಪ್ರತಿಷ್ಠಾಪನೆಗೊಂಡ ಗಣಪನ ವಿಗ್ರಹದ ಮುಂದೆ ಲಕ್ಷ ಗರಿಕೆಗಳಿಂದ ನಿರ್ಮಿಸಲಾದ ಗಣಪನ ಕಲಾಕೃತಿ ನೆರೆದ ಭಕ್ತಾದಿಗಳ ಗಮನಸೆಳೆಯಿತು.
ಲೋಕ ಕಲ್ಯಾಣಾರ್ಥವಾಗಿ ಶ್ರೀ ರಾಮಾಂಜನೇಯ ದೇವಾಲಯದ ಭಕ್ತರು ಹಾಗೂ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ೧ ಲಕ್ಷ ಗರಿಕೆಗಳನ್ನು ಸಂಗ್ರಹಿಸಿ ಗಣಪನ ಮುಖವನ್ನು ಹೋಲುವ ಆಕೃತಿಯಂತೆ ಗರಿಕೆಗಳನ್ನು ಜೋಡಿಸಲಾಗಿದೆ. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯ ಜನಾರ್ಧನ ನಾಯ್ಕ ಮಾತನಾಡಿ,” ದೇವಸ್ಥಾನ ಮಂಡಳಿಯ ಸದ್ಯಸರು ಸಹಾಯದಿಂದ ಈ ಗಣಪತಿ ಆಕೃತಿ ಮಾಡಲಾಗಿದೆ. ಸರ್ವರಿಗೂ ಒಳಿತನ್ನು ಮಾಡುವಂತೆ ಈ ಮೂಲಕ ವಿಘ್ನ ನಿವಾರಕನ್ನು ಪೂಜಿಸಲಾಗಿದೆ “ಎಂದರು.
ಪಟ್ಟಣ ಒಳಗೊಂಡoತೆ ಸುತ್ತಲಿನ ಗ್ರಾಮಗಳ ಜನರು ಆಗಮಿಸಿ ಪ್ರತಿಷ್ಠಾಪಿತ ಗಣಪಗೆ ಪೂಜೆ ಸಲ್ಲಿಸಿ ಪುನೀತರಾದರು.
More Stories
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!
ಸಂಸದೆಯಾದ ಬಳಿಕ ನನ್ನ ಮೊದಲ ಆದ್ಯತೆಯೇ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ-ಡಾ.ಅಂಜಲಿ ನಿಂಬಾಳ್ಕರ್