March 29, 2024

Bhavana Tv

Its Your Channel

ಮೀನುಗಾರರ ಬೃಹತ್ ಪ್ರತಿಭಟನೆಗೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ -ಸೂರಜ್ ನಾಯ್ಕ ಸೋನಿ

ಕುಮಟಾ: ಚಿಪ್ಪಿ ಗಣಿಗಾರಿಕೆಗೆ ಪರವಾನಗಿ ನೀಡದಂತೆ ಒತ್ತಾಯಿಸಿ ಮೀನುಗಾರರು ಜ. 25ಕ್ಕೆ ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಘೋಷಿಸಿದರು.

ಕುಮಟಾದ ಹೋಟೆಲ್‌ವೊಂದರಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಪರ ಹೋರಾಟಗಾರ ಮತ್ತು ಜೆ.ಡಿ ಎಸ್ ಮುಖಂಡ ಸೂರಜ ನಾಯ್ಕ ಸೋನಿ ಅವರು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ನಾಡಿಮಿಡಿತವಾದ ಮೀನುಗಾರರ, ರೈತರ ನೋವಿಗೆ ಸ್ಪಂದಿಸಬೇಕಾಗಿರುವುದು ನಮ್ಮ ಕರ್ತವ್ಯ. ಮೀನುಗಾರರಿಗೆ ದೊರೆಯಬೇಕಾದ ನ್ಯಾಯಕ್ಕಾಗಿ ಜ. 25ರಂದು ಅಘನಾಶಿನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ.
ಈ ಹೋರಾಟಕ್ಕೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ. ಮೀನುಗಾರರ ಜೊತೆಗೆ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ. ನಮ್ಮ ಪಕ್ಷದ ಕನಸಾದ ಜನತಾ ಜಲಧಾರೆ ಯೋಜನೆಯಡಿ ಅಘನಾಶಿನಿ ನದಿಯ ಸಮಸ್ಯೆಯನ್ನೂ ಅಳವಡಿಸಲಾಗಿದೆ. ಜನತಾ ಜಲಧಾರೆ ರಥ ಈ ಕ್ಷೇತ್ರಕ್ಕೆ ಬಂದಾಗ, ಅಘನಾಶಿನಿಗೂ ಹೋಗುತ್ತೆ. ಅಲ್ಲಿನ ಸಮಸ್ಯೆಗಳ ಕುರಿತಾದ ಭಿತ್ತಿ ಚಿತ್ರಗಳನ್ನು ತೋರಿಸುವ ಮೂಲಕ ಈ ಸಮಸ್ಯೆಯನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ಯುವ ಕಾರ್ಯ ಮಾಡುತ್ತೇವೆ. ಈ ಕ್ಷೇತ್ರದ ಮೀನುಗಾರರ ರಕ್ಷಣೆಗಾಗಿ ಈ ಹೋರಾಟದಲ್ಲಿ ಪಾಲ್ಗೊಂಡು ಅವರಿಗೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಕುಮಟಾ ತಾಲೂಕು ಅಧ್ಯಕ್ಷ ಸಿ ಜಿ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಜಿ ಕೆ ಪಟಗಾರ, ಜೆಡಿಎಸ್ ಕುಮಟಾ ಘಟಕದ ಕಾರ್ಯಾಧ್ಯಕ್ಷ ಬಲೀಂದ್ರ ಗೌಡ , ಪ್ರಮುಖರಾದ ದತ್ತ ಪಟಗಾರ, ಶ್ರೀಪಾದ ಶೇಟ್, ರೇಹಮಾನ್ ಧಾಮ್ದರ್, ಸುದರ್ಶನ ಶಾನಭಾಗ ಇತರರು ಇದ್ದರು.

error: