April 19, 2024

Bhavana Tv

Its Your Channel

ಹೆತ್ತ ತಾಯಿಯನ್ನೇ ಹೊಡೆದು ಕೊಂದ ಮಗ

ಕುಮಟಾ : ಧೂರ್ತ ಮಗನೊಬ್ಬ ಹೆತ್ತ ತಾಯಿಯನ್ನೇ ಹೊಡೆದು ಕೊಂದ ಭಯಾನಕ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿ ಗ್ರಾಮದಲ್ಲಿ ನಡೆದಿದೆ .

ಕೂಜಳ್ಳಿಯ ಗೀತಾ ಭಟ್ ( 60 ) ಅವರನ್ನು ಅವರ ಮಗ ಮಧುಕರ ಭಟ್ ಎಂಬಾತ ಕೊಲೆ ಮಾಡಿದ್ದಾನೆ . ಮದ್ಯಪಾನ ಸೇರಿದಂತೆ ದುಷ್ಟಟಗಳಿಗೆ ದಾಸನಾಗಿದ್ದ ಮಧುಕರ್ ಕುಡಿತಕ್ಕೆ ಹಣ ನೀಡುವಂತೆ ಪದೇಪದೆ ಪೀಡಿಸುತ್ತಿದ್ದ . ಕೆಲವೊಮ್ಮೆ ಆತನ ಕಿರುಕುಳ ತಾಳಲಾರದೆ ಹಣ ಕೊಡಲೇಬೇಕಾಗಿ ಬರುತ್ತಿತ್ತು . ಆದರೆ ಮಂಗಳವಾರ ಹಣ ಕೊಡಲಿಲ್ಲ ಎಂಬ ಕಾರಣದಿಂದ ಸಿಟ್ಟಿಗೆದ್ದ ಮಧುಕರ್ ತಾಯಿ ಎಂದೂ ನೋಡದೆ ಆ ಹೆಣ್ಮಗಳನ್ನು ಹೊಡೆದೇ ಕೊಂದು ಹಾಕಿದ್ದಾನೆ . ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ವರದಿ: ವಿಶ್ವನಾಥ ಜಿ ನಾಯ್ಕ ಕುಮಟಾ

error: