ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಈಜಲು ಬಂದ ಪ್ರವಾಸಿ ಯುವಕರಿಬ್ಬರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದನ್ನು ಘಮನಿಸಿದ ಅಲ್ಲಿನ ಸ್ಥಳೀಯ ಮೀನುಗಾರರು ಇಬ್ಬರು ಯುವಕರನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಅನ್ ಲಾಕ್ -೩ ಘೋಷಣೆಯಾದಂತೆ ಮುರುಡೇಶ್ವರಕ್ಕೆ ಬರುವ ಪ್ರವಾಸಸಿಗ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಕ್ಕೆ ಬಂದ ಯುವಕರ ತಂಡ ಶಿವನ ದರ್ಶನ ಪಡೆದು ಮೋಜು ಮಸ್ತಿಗೆ ಸಮುದ್ರಕ್ಕಿಳಿದ್ದಾರೆ. ಈ ವೇಳೆ ಇಬ್ಬರು ಯುವಕರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿರುದನ್ನು ಗಮನಿಸಿದ ಸ್ಥಳೀಯ ಮೀನುಗಾರರಾದ ಈಶ್ವರ ಬಲುಂಡಿ, ಜಗದೀಶ ಮೊಗೇರ ಹಾಗೂ ಈಶ್ವರ ಪಟಾಲಿಗಾರ್ಡನ್ ರವರು ಪಾತಿದೋಣಿ ಸಹಾಯದಿಂದ ಯುವಕರ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ಸಮುದ್ರ ಅಲೆ ಅಬ್ಬರ ಜೋರಾಗಿದ್ದರಿಂದ ರಕ್ಷಣೆಗೆ ಹೊದ ಪಾತಿದೋಣಿ ಕೂಡ ಮುಳುಗಡೆಯಾಗಿದ್ದು. ತಕ್ಷಣಕ್ಕೆ ಮೀನುಗಾರರ ಸಮಯ ಪ್ರಜ್ಞೆಯಿಂದ ಇನ್ನೊಂದು ದೋಣಿಯ ಸಹಾಯದಿಂದ ಪ್ರವಾಸಿಗರನ್ನು ಮತ್ತು ಪಾತಿ ದೋಣಿ ರಕ್ಷಿಸುವಲ್ಲಿ ಮೀನುಗಾರರು ಯಶಸ್ವಿಯಾಗಿದ್ದಾರೆ.
ಮೀನುಗಾರರ ಸಮಯ ಪ್ರಜ್ಞೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
More Stories
ಭಟ್ಕಳ ತಾಲೂಕಿನ ಮುರ್ಡೇಶ್ವರದ ಬೀನಾ ವೈದ್ಯ ಎಜುಕೇಶನಲ್ ಟ್ರಸ್ಟ್ ನಲ್ಲಿ ಬೀನಾ ವೈದ್ಯ ಅಕ್ಷರ ಪರ್ವ ಸ್ಕೊಲರ್ ಶಿಪ್ 2024-25 ಯೋಜನೆ.
ಆರ್.ಎನ್.ಎಸ್ ದ್ವಿತೀಯ ಪಿಯುಸಿಉತ್ತಮ ಫಲಿತಾಂಶ
ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು: ಸಚಿವರಾದ ಶ್ರೀ ಮಂಕಾಳ್ ಎಸ್ ವೈದ್ಯ