April 25, 2024

Bhavana Tv

Its Your Channel

ಮುರ್ಡೇಶ್ವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

    ಮುರ್ಡೇಶ್ವರ ಲಯನ್ಸ್ ಕ್ಲಬ್ ಕೋವಿಡ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ತನ್ನ ಸಮಾಜಮುಖಿ ಕಾರ್ಯಗಳಿಂದ ಇತರರಿಗೆ ಮಾದರಿಯಾಗಿದೆ ಎಂದು ೩೧೭ಬಿ ಲಯನ್ ಜಿಲ್ಲೆಯ ಗರ‍್ನರ್ ಡಾ.ಗಿರೀಶ ಕುಚಿನಾಡ್‌ರವರು ಹೇಳಿದರು.

ಅವರು ಮುರ್ಡೇಶ್ವರದ ಆರ್.ಎನ್.ಶೆಟ್ಟಿ ರೂರಲ್ ಪಾಲಿಟೆಕ್ನೀಕ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕ್ಲಬ್‌ನ ಅಧಿಕೃತ ಭೇಟಿ ನೀಡಿ ಕ್ಲಬ್‌ನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಮಾತನಾಡಿದರು. ಇದೇ ವೇಳೆ ಹಿಂದಿನ ಲಯನ್ ಗರ‍್ನರ್ ಡಾ.ರವಿ ಹೆಗಡೆ ಹೂವಿನಮನೆಯವರು ೨೦೨೧-೨೧ನೇ ಲಯನ್ ವರ್ಷದ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.
ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾದ ಶಿವಾನಂದ ದೈಮನೆ, ಕಾರ್ಯದರ್ಶಿಗಳಾದ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾದ ವಿಶ್ವನಾಥ ಮಡಿವಾಳರವರಿಗೆ ಪ್ರಮಾಣವಚನ ಬೋಧಿಸಲಾಯಿತು.
ಮೊದಲ ಉಪಾಧ್ಯಕ್ಷರಾಗಿ ಬಸ್ತಾö್ಯಂವ್ ಡಿಕೋಸ್ತ, ಎರಡನೇ ಉಪಾಧ್ಯಕ್ಷರಾಗಿ ಕಿರಣ ಕಾಯ್ಕಿಣಿ, ಸಹ ಕಾರ್ಯದರ್ಶಿಯಾಗಿ ಪಾಂಡುರAಗ ಅಳ್ವೆಗದ್ದೆ, ಸದಸ್ಯತ್ವ ಅಭಿಯಾನದ ಅಧ್ಯಕ್ಷರಾಗಿ ಡಾ.ಸುನೀಲ್ ಜತ್ತನ್, ಕ್ಲಬ್ ಸಮನ್ವಯಾಧಿಕಾರಿಯಾಗಿ ನಾಗರಾಜ ಭಟ್, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ಡಾ.ವಾದಿರಾಜ್ ಭಟ್, ವ್ಯಾವಹಾರಿಕ ಸಂವಹನದ ಅಧ್ಯಕ್ಷರಾಗಿ ಎಮ್.ವಿ.ಹೆಗಡೆ, ಲಯನ್ ಟೇಮರ್ ಆಗಿ ಮಂಜುನಾಥ ನಾಯ್ಕ, ಟೇಲ್‌ಟ್ವಿಸ್ಟರ್ ಆಗಿ ಕೃಷ್ಣ ಹೆಗಡೆ, ನಿರ್ದೇಶಕರುಗಳಾಗಿ ಡಾ.ಆಯ್.ಆರ್.ಭಟ್, ಗೌರೀಶ್ ಆರ್,ನಾಯ್ಕ, ಸುಬ್ರಾಯ ನಾಯ್ಕ, ಜಗದೀಶ್ ಜೈನ್, ಡಾ.ಹರಿಪ್ರಸಾದ ಕಿಣಿ, ಬಾಬು ಮೊಗೇರ್, ಎ.ಎನ್ ಶೆಟ್ಟಿ, ವಿಶ್ವನಾಥ ಕಾಮತ್, ಕಿರಣ್ ಮಾನಕಾಮೆ, ದಯಾನಂದ ಮೆಣಸಿನಮನೆ, ಗಜಾನನ ಭಟ್ ಹಾಗೂ ಡಾ.ಮನೋಜ್ ಆಚಾರ್ಯವರನ್ನು ನಿಯುಕ್ತಿಗೊಳಿಸಲಾಯಿತು.
ನಿಕಟಪೂರ್ವ ಅಧ್ಯಕ್ಷರಾದ ಗೌರೀಶ ಆರ್.ನಾಯ್ಕರವರು ನೂತನ ಅಧ್ಯಕ್ಷರಾದ ಶಿವಾನಂದ ದೈಮನೆಯವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರು ಮಾತನಾಡಿ ಕ್ಲಬ್‌ನ ಎಲ್ಲಾ ಸದಸ್ಯರ ಸಹಯೋಗದೊಂದಿಗೆ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.
ಇದೇ ವೇಳೆ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಹಾಗೂ ಅಗ್ನಿಶಾಮಕ ದಳವು ಜಂಟಿಯಾಗಿ “ತುರ್ತು ಸಹಾಯವಾಣಿ” ಸ್ಟಿಕ್ಕರ್‌ಗಳನ್ನು ಬಿಡುಗಡೆಗೊಳಿಸಿದರು. ಕೋವಿಡ್ ಸಂದರ್ಭದಲ್ಲಿ ಜನಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರನ್ನು, ರಕ್ತ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ ಲಯನ್ ವರ್ಷದ ಸಮಗ್ರ ವರದಿಯನ್ನು ಮಂಡಿಸಿದರು. ಗೌರೀಶ ನಾಯ್ಕ ಸ್ವಾಗತಿಸಿದರು. ಜಗದೀಶ ಜೈನ್ ವಂದಿಸಿದರು. ಹಿರಿಯ ಲಯನ್ ಸದಸ್ಯಾದ ಎಮ್.ವಿ ಹೆಗಡೆ, ಹಾಗೂ ಕೆ.ಬಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

error: