March 29, 2024

Bhavana Tv

Its Your Channel

ಸಮುದ್ರ ಪಾಲಾಗಿದ್ದ ಶಿವಮೊಗ್ಗ ತಾಲೂಕಿನ ಶಿಕಾರಿಪುರದ ಮಣಿಕಂಠನ ಶವ ಪತ್ತೆ

ಭಟ್ಕಳ: ಮುರ್ಡೇಶ್ವರ ಪ್ರವಾಸಕ್ಕೆ ಬಂದು ರವಿವಾರ ಸಂಜೆ ಸಮುದ್ರ ಸ್ನಾನಕ್ಕೆ ಹೋಗಿದ್ದ ವೇಳೆಯಲ್ಲಿ ಅಲೆಯ ಹೊಡೆತಕ್ಕೆ ಸಿಲುಕು ಸಮುದ್ರ ಪಾಲಾಗಿದ್ದ ಶಿವಮೊಗ್ಗ ತಾಲೂಕಿನ ಶಿಕಾರಿಪುರದ ಮಣಿಕಂಠ ಎಂ. ತಂದೆ ಮಂಜಪ್ಪ ಇವರ ಶವವು ಸಮುದ್ರ ಕಿನಾರೆಯಲ್ಲಿ ಸೋಮವಾರ ಮದ್ಯಾಹ್ನದ ಸುಮಾರಿಗೆ ಪತ್ತೆಯಾಗಿದೆ.
ಶಿವಮೊಗ್ಗದ ಶಿಕಾರಿಪುರದಿಂದ ನಾಲ್ವರು ಗೋಕರ್ಣ, ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದ ವೇಳೆಯಲ್ಲಿ ರವಿವಾರ ಈ ದುರಂತ ಸಂಭವಿಸಿತ್ತು. ಈ ಕುರಿತು ಶಿಕಾರಿಪುರದ ಹುಚ್ಚರಾಯಪ್ಪ ತಂದೆ ಸಿದ್ದಪ್ಪ ಎನ್ನುವವರು ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹವನ್ನು ವಾರಿಸುದಾರರಿಗೆ ಬಿಟ್ಟು ಕೊಡಲಾಗಿದ್ದು ಮುರ್ಡೇಶ್ವರ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ರವೀಂದ್ರ ಬಿರಾದಾರ ಅವರು ತನಿಖೆ ಕೈಗೊಂಡಿದ್ದಾರೆ.

error: