March 29, 2024

Bhavana Tv

Its Your Channel

ಜೂಜಾಟ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು, 7 ಜನರ ಮೇಲೆ ಪ್ರಕರಣ ದಾಖಲು

ಭಟ್ಕಳ ತಾಲೂಕಿನ ಮುರುಡೇಶ್ವರ ಬಸ್ತಿ ಅಮೃತ ಫುಡ್‌ಲೈನ್ ಹೊಟೇಲ್ ಹಿಂಭಾಗದ ತೆಂಗಿನತೋಟದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು 7 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳನ್ನು ಈಶ್ವರ ನಾರಾಯಣ ನಾಯ್ಕ, ವಿನಾಯಕ ವೆಂಕಟ್ರಮಣ ನಾಯ್ಕ, ಯಶೋಧರ ವೆಂಕಪ್ಪ ನಾಯ್ಕ, ನವೀನ ನಾರಾಯಣ ಶೆಟ್ಟಿ, ಮಂಜುನಾಥ ದುರ್ಗಪ್ಪ ನಾಯ್ಕ, ಗೋಪಾಲ ಮಾದೇವ ನಾಯ್ಕ,ಈಶ್ವರ ತಿಮ್ಮಯ್ಯ ನಾಯ್ಕ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ರು.11400 ನಗದು, ಇಸ್ಪೀಟ್ ಎಲೆಗಳನ್ನು ಪೊಲೀಸರು ಜಪ್ತುಪಡಿಸಿಕೊಂಡಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಐ ಪರಮಾನಂದ ಕೊಣ್ಣೂರು ತನಿಖೆ ಕೈಗೊಂಡಿದ್ದಾರೆ

error: