March 29, 2024

Bhavana Tv

Its Your Channel

ದುಬೈನ ಆರ್. ಎ. ಕೆ. ಸಿರಾಮಿಕ್ಸ್ ಕಂಪನಿಗೆ ಮುರುಡೇಶ್ವರ ಪಾಲಿಟೆಕ್ನಿಕ್ ನ 9 ಡಿಪ್ಲೋಮಾ ಸಿರಾಮಿಕ್ ವಿದ್ಯಾರ್ಥಿಗಳು ಆಯ್ಕೆ

ಮುರುಡೇಶ್ವರ :- ದುಬೈ ನ ಆರ್. ಎ. ಕೆ. ಸಿರಾಮಿಕ್ಸ್ ಕಂಪನಿ ವಿಶ್ವದ ಸಿರಾಮಿಕ್ ಟೈಲ್ಸ್, ಸ್ಯಾನಿಟರಿ ವೇರ್ ತಯಾರಿಕೆಯಲ್ಲಿ ಅತಿ ದೊಡ್ಡದಾದ ಸಿರಾಮಿಕ್ ಬ್ರಾಂಡುಗಳಲ್ಲಿ ಒಂದಾಗಿದೆ . ಇತ್ತೀಚೆಗೆ ಈ ಕಂಪನಿಯ ವತಿಯಿಂದ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಮುರುಡೇಶ್ವರ ಆರ್ .ಎನ್. ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನ ಡಿಪ್ಲೋಮಾ ಸಿರಾಮಿಕ್ ಟೆಕ್ನಾಲಜಿ ಕೋರ್ಸ್ ಮುಗಿಸಿದ ಈ ಕೆಳಗಿನ 9 ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.ಸುದೀಪ್ ಕಾರ್ವಿ ಬೈಂದೂರ್, ಶಶಾಂಕ್ ಶೆಟ್ಟಿ ಕುಂದಾಪುರ್, ಚರಣ್ ವಿ ನಾಯ್ಕ ಸರ್ಪನಕಟ್ಟೆ, ಮನೋಜ್ ಸುರೇಶ್ ಮೊಗೇರ್ ಬೆಳಕೆ, ಹರಿಹರ ಎಂ ನಾಯ್ಕ್ ಇಡಗುಂಜಿ, ಸಾತ್ವಿಕ್ ಪೂಜಾರಿ ಉಡುಪಿ, ದರ್ಶನ್ ಎಂ ನಾಯ್ಕ ಇಡಗುಂಜಿ, ನಿತೇಶ್ ಶ್ರೀಧರ್ ಜೋಗಿ ಮುರುಡೇಶ್ವರ, ದಯಾನಂದ್ ವಿ ನಾಯ್ಕ ಅನಿಲ್ ಗೋಡ್.

ಕಂಪನಿಯ ವತಿಯಿಂದ ಪ್ರಾರಂಭದಲ್ಲಿ ಇವರಿಗೆ 40,000 ರೂಗಳ ಸಂಬಳ ದೊಂದಿಗೆ ಉಚಿತ ಊಟ ವಸತಿ ಹಾಗೂ ಉಚಿತ ಆರೋಗ್ಯ ಸೇವೆ ಮತ್ತು ವರ್ಷದಲ್ಲಿ ಒಂದು ತಿಂಗಳ ಸಂಬಳದೊAದಿಗೆ ರಜೆ ಹಾಗೂ ಭಾರತಕ್ಕೆ ಬಂದು ಹೋಗುವ ಪ್ರವಾಸ ಭತ್ಯೆ ಇತ್ಯಾದಿ ಸೌಲಭ್ಯಗಳನ್ನ ಒದಗಿಸಲಾಗುತ್ತದೆ ಪ್ರತಿ ವರ್ಷ ಮುರುಡೇಶ್ವರದಲ್ಲಿ ಡಿಪ್ಲೋಮಾ ಸಿರಾಮಿಕ್ ಮುಗಿಸಿದ 8 ರಿಂದ 10 ವಿದ್ಯಾರ್ಥಿಗಳು ಆರ್ .ಎ. ಕೆ ಸಿರಾಮಿಕ್ ಕಂಪನಿಗೆ ಆಯ್ಕೆಯಾಗುತ್ತಿದ್ದು ಇಲ್ಲಿವರೆಗೂ 300ಕ್ಕೂ ಅಧಿಕ ಡಿಪ್ಲೋಮಾ ಸಿರಾಮಿಕ್ ಮುಗಿಸಿದ ಅಭ್ಯರ್ಥಿಗಳು ಈ ಒಂದು ಕಂಪನಿಯಲ್ಲಿ ಅನೇಕ ವಿವಿಧ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇಲ್ಲಿವರೆಗೂ ಮುಗಿಸಿದ 700ಕ್ಕೂ ಅಧಿಕ ಸಿರಾಮಿಕ ಅಭ್ಯರ್ಥಿಗಳು ದೇಶವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಡಿಪ್ಲೋಮಾ ಸಿರಾಮಿಕ್ ಮುಗಿಸಿದ ಶೇಕಡ ನೂರರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಗ್ಯಾರಂಟಿ ನೀಡಲಾಗುವುದು, ಸಿರಾಮಿಕ ನಲ್ಲಿ ಕೆಲವೇ ಶೀಟು ಬಾಕಿ ಇರುವುದರಿಂದ ಆಸಕ್ತಿ ಇರುವ ವಿದ್ಯಾರ್ಥಿಗಳು ಕೂಡಲೇ ಬಂದು ಪ್ರವೇಶ ಪಡೆಯಬೇಕೆಂದು ಈ ಮೂಲಕ ಪಾಲಿಟೆಕ್ನಿಕ್ ನ ಉಪ ಪ್ರಾಚಾರ್ಯರು, ಸುರಾಮಿಕ್ ವಿಭಾಗದ ಮುಖ್ಯಸ್ಥರು ಹಾಗೂ ಉದ್ಯೋಗ ಅಧಿಕಾರಿಗಳು ಆದ ಕೆ. ಮರಿಸ್ವಾಮಿಯವರು ಮಾಹಿತಿಯನ್ನು ನೀಡಿರುತ್ತಾರೆ.
ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಆರ್. ಎನ್. ಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಶ್ರೀ ದಿನೇಶ್ ಗಾವ್ಕರ್ ರವರು ಹಾಗೂ ಪ್ರಾಚಾರ್ಯರಾದ ಸಂತೋಷ್ ಆರ್. ಎ. ಅವರು ಹರ್ಷ ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

error: