April 20, 2024

Bhavana Tv

Its Your Channel

ಬಾಲಗಂಗಾಧರ ತಿಲಕ್ ರವರ ಜನ್ಮ ದಿನದ ಪ್ರಯುಕ್ತ ಬೃಹತ್ ಜಾಥ ಹಾಗೂ ಸೈನಿಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮುರುಡೇಶ್ವರ :– ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ವಿಭಾಗ, ಮುರ್ಡೇಶ್ವರ ಶಾಖೆ ವತಿಯಿಂದ ಕಾರ್ಯಕ್ರಮವನ್ನು ಹಿಂದೂ ಜಾಗರಣ ವೇದಿಕೆ ಮುರುಡೇಶ್ವರ ಅವರ ಆಶ್ರಯದೊಂದಿಗೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಇವರ ಜನ್ಮ ದಿನದ ಪ್ರಯುಕ್ತ ಬೃಹತ್ ಜಾಥ ಹಾಗೂ ಸೈನಿಕರಿಗೆ ಸನ್ಮಾನ ಮತ್ತು ಪತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತ್ತು. ಈ ಜಾಥದಲ್ಲಿ ೮,೯,೧೦ ತರಗತಿ ವಿದ್ಯಾರ್ಥಿಗಳು ಗಮನ ಸೆಳೆದರು.

ಈ ಸಂದರ್ಭದಲ್ಲಿ ಅಶ್ವತ್ ಭಟ್ ಸಿರಸಿ ವಿಭಾಗ ಸಂಚಾಲಕ್, ಕಾರಾವಾರ ಜಿಲ್ಲಾ ಸಂಚಾಲಕ್ ಸುಜನ್ ಶೇಟ್, ಶಿರಸಿ ನಗರ ಕಾರ್ಯದರ್ಶಿ ಚನ್ನಪ್ಪ ಹಾಗೂ ಎಬಿವಿಪಿ ಮುರುಡೇಶ್ವರದ ಕಾರ್ಯಕರ್ತರು ಮತ್ತು ಹಿರಿಯ ಕಾರ್ಯಕರ್ತರು, ಅಧ್ಯಾಪಕರು ,ಮಾಜಿ ಸೈನಿಕರು, ಎಬಿವಿಪಿ ಯ ಹಿತೈಷಿಗಳು ಉಪಸ್ಥಿತರಿದ್ದರು,
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಮತ್ತು ಪುಷ್ಪಾರ್ಚನೆ ಮೂಲಕ ಪ್ರಾರಂಭಿಸಲಾಯಿತು
ಪ್ರಸ್ತಾವಿಕ ಅಶ್ವಥ್ ಭಟ್, ವಕ್ತಾರಕರಾಗಿ ಮಂಗಲ್ ದಾಸ್ , ಅಗ್ನಿಪತ್ ಯೋಜನೆ ಕುರಿತು ಮಾಜಿ ಸೈನಿಕರಾದ ಶ್ರೀಕಾಂತ ಅವರು ಭೋದಿಸಿದರು, ಅಧ್ಯಕ್ಷೀಯ ಮಾತನ್ನು ಗಣಪತಿ ನಾಯಕ್ ಇವರು ನೆರವೇರಿಸಿದರು.

error: