April 24, 2024

Bhavana Tv

Its Your Channel

ಬಿ.ಎಸ್ಸಿ ಹಾಗೂ ಬಿ.ಕಾಂ ಅಂತಿಮ ವರ್ಷದ ಫಲಿತಾಂಶ ಪ್ರಕಟ ಉತ್ತಮ ಸಾಧನೆ ಮಾಡಿದ ಸಿದ್ಧಾರ್ಥ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳು

ಶಿರಾಲಿ: ಸಿದ್ಧಾರ್ಥ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೦-೨೧ ರ ಬಿ.ಎಸ್ಸಿ.ಹಾಗೂ ಬಿ.ಕಾಂ.ಅoತಿಮ ವರ್ಷದ ಫಲಿತಾಂಶ ಪ್ರಕಟವಾಗಿದ್ದು, ಬಿ.ಕಾಂ ಪರೀಕ್ಷೆಯಲ್ಲಿ ೧೦೦% ಹಾಗೂ ಬಿ.ಎಸ್ಸಿ. ಪರೀಕ್ಷೆಯಲ್ಲಿ ೯೭% ಫಲಿತಾಂಶ ಬಂದಿರುತ್ತದೆ.

ಬಿ.ಕಾಂ ಪರೀಕ್ಷೆಯಲ್ಲಿ ೩೧ ವಿದ್ಯಾರ್ಧಿಗಳು ಪರೀಕ್ಷೆಯನ್ನು ನೀಡಿರುತ್ತಾರೆ.ಅದರಲ್ಲಿ ಎಲ್ಲಾ ವಿದ್ಯಾರ್ಧಿಗಳು ಡಿಸ್ಟಿಂಕ್ಷನಲ್ಲಿ ಅಂಕವನ್ನು ಪಡೆದು ಪಾಸಾಗಿರುತ್ತಾರೆ.
ಬಿ.ಕಾಂ ಪರೀಕ್ಷೆಯಲ್ಲಿ ಕು.ಪ್ರಗತಿ ಎನ್. ಹೆಬ್ಬಾರ ೯೬.೫೭%, ಕು. ಕವಿತಾ ಗೋವಿಂದ ಮೋಗೆರ ೯೪.೨೯ % , ಕು.ಶ್ವೇತಾ ಐ.ನಾಯ್ಕ ೯೨.೭೧ % ಹಾಗೂ ಕು. ವಿಶ್ವ ಎಮ್ ದೇವಾಡಿಗ ೯೨.೫೭% ಪಡೆದು ಅಗ್ರ ಸ್ಥಾನಗಳನ್ನು ಪಡೆದಿರುತ್ತಾರೆ.
ಈ ಪರೀಕ್ಷೆಯಲ್ಲಿ ಕೋಸ್ಟ್ ಅಕೌಂಟಿAಗ್ ವಿಷಯದಲ್ಲಿ ೧೩ ವಿದ್ಯಾರ್ಥಿಗಳು, ಮ್ಯಾನೇಜ್ಮೇಂಟ್ ಅಕೌಂಟಿAಗ್ ವಿಷಯದಲ್ಲಿ ೦೨ ವಿದ್ಯಾರ್ಥಿಗಳು, ಬಿಸಿನೆಸ್ ಲಾ ವಿಷಯದಲ್ಲಿ ೦೧ ವಿದ್ಯಾರ್ಥಿ ಹಾಗೂ ಇನ್ಕಮ್ ಟ್ಯಾಕ್ಸ ವಿಷಯದಲ್ಲಿ ೦೧ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಅಂಕವನ್ನು ಪಡೆದಿರುತ್ತಾರೆ.

ಬಿ.ಎಸ್ಸಿ ಪರೀಕ್ಷೆಯಲ್ಲಿ ಕು.ಸಹನಾ ಸತೀಶ ಶೆಟ್ಟಿ ೯೧.೨%, ಕು. ಹೇಮಾ ಮಾಸ್ತಿ ನಾಯ್ಕ ೮೬%, ಕು. ಪವಿತ್ರಾ ಪಿ ನಾಯ್ಕ ೮೪.೫೫% ಹಾಗೂ ಕು. ಚೈತ್ರಾ ವಿ. ದೇವಡಿಗ ೮೪% ಪಡೆದಿರುತ್ತಾರೆ.
ವಿದ್ಯಾರ್ಧಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

error: