ಸಿದ್ದಾಪುರ: ಹಳ್ಳ ದಾಟುವಾಗ ಕಾಲುಜಾರಿ ಬಿದ್ದು ನೀರಿನಲ್ಲಿ ಮೃತಪಟ್ಟ ಸಿದ್ದಾಪುರ ತಾಲೂಕಿನ ತಾರೇಸರದ ಪ್ರಸಿದ್ದ ಮದ್ದಲೆ ವಾದಕ ಪರಮೇಶ್ವರ ಹೆಗಡೆ ಅವರ ಮನೆಗೆ ತೆರಳಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕೃತಿ ವಿಕೋಪದ ಅಡಿ ಐದು ಲಕ್ಷ ರೂಪಾಯಿ ಮೊತ್ತದ ಚೆಕ್ಕನ್ನೂ ಹಸ್ತಾಂತರಿಸಿ ಸಾಂತ್ವನ ಹೇಳಿದರು.
ಅತೀವೃಷ್ಠಿಯಿಂದ ಹೊಳೆಯಲ್ಲಿ ಕಾಲು ಜಾರಿ ಬಿದ್ದು ಮೃತರಾದ ಹೆಗ್ಗರಣಿ ಪಂಚಾಯತ ವ್ಯಾಪ್ತಿಯ ತಾರೇಸರ ಪರಮೇಶ್ವರ ಹೆಗಡೆ ಅವರು ಕಲಾವಿದರಿಗೆ, ಕಲಾಸಕ್ತರಿಗೆ ಪರಮಣ್ಣ ಎಂದೇ ಹೆಸರಾಗಿದ್ದರು. ಅವರ ಅಕಾಲಿಕ ಸಾವು ಯಕ್ಷಗಾನ, ತಾಳಮದ್ದಲೆ ಕ್ಷೇತ್ರಕ್ಕೂ ನಷ್ಟ ಎಂದೂ ಕಾಗೇರಿ ಹೇಳಿದರು.
ಸರಕಾರ ಕೆಲಸ ಎಂದರೆ ವಿಳಂಬ ಎನ್ನುವ ವೇಳೆಗೆ ಕಲಾವಿದ ಪರಮೇಶ್ವರ ಹೆಗಡೆ ಅವರು ಆಕಸ್ಮಿಕವಾಗಿ ಅಗಲಿದ ನಾಲ್ಕೇ ದಿನದಲ್ಲಿ ಸಂವಿಧಾನಾತ್ಮಕ ಪರಮೋಚ್ಛ ಸ್ಥಾನದಲ್ಲಿ ಇರುವ ಕಾಗೇರಿ ಅವರು ಕ್ಷೇತ್ರದ ಶಾಸಕರಾಗಿ ಕುಟುಂಬದ ನೋವಿನಲ್ಲಿ ಭಾಗಿಯಾಗಿ ಸಾಂತ್ವನ ನುಡಿದರು. ೫ ಲ.ರೂ ಮೊತ್ತದ ಚೆಕ್ ನೀಡಿದ್ದೂ ಗಮನ ಸೆಳೆಯಿತು. ಈ ವೇಳೆ ಸ್ಥಳೀಯ ಪ್ರಮುಖರು ಇದ್ದರು.
More Stories
ಅಪರೂಪದ ದೇವಾಲಯ. ಬಲಮುರಿ, ತ್ರಿನೇತ್ರ, ಆರುಕೈಗಳುಳ್ಳ ಮಹಾ ಗಣಪತಿ
ಜನಮನ ಸೂರೆಗೊಂಡ ನಾಣಿಕಟ್ಟಾ ಯಕ್ಷಗಾನ ಹಿಮ್ಮೇಳ ವೈಭವ.
ನಿಲ್ಕುಂದ- ಸಂತೆಗುಳಿ ಸರ್ವಋತು ರಸ್ತೆಗೆ ನಿರ್ಲಕ್ಷö್ಯ ;
ಹೋರಾಟಕ್ಕೂ ಸ್ಪಂಧಿಸದ ಸರಕಾರ- ರವೀಂದ್ರನಾಯ್ಕ.