ಸಿದ್ಧಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅಸಮರ್ಪಕ ಜಿಪಿಎಸ್ಗೆ ಪುನರ್ ಪರೀಶಿಲಿಸಲು ಆಗ್ರಹಿಸಿ ಸಿದ್ಧಾಪುರ ತಾಲೂಕಿನಾದ್ಯಂತ ಅರಣ್ಯ ಅತಿಕ್ರಮಣದಾರರು ಸುಮಾರು 6,117 ಪುನರ್ ಸರ್ವೇಗೆ ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಕಾನೂನಾತ್ಮಕ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷರವೀಂದ್ರನಾಯ್ಕ ತಿಳಿಸಿದರು.
ಅವರು ಇಂದು ಸಿದ್ಧಾಪುರ ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮೇಲ್ಮನವಿ ಸ್ವೀಕೃತ ಪ್ರತಿಗಳನ್ನ ಅರಣ್ಯ ಅತಿಕ್ರಮಣದಾರರಿಗೆ ವಿತರಿಸಿ ಮಾತನಾಡುತ್ತಿದ್ದರು. ಅರಣ್ಯ ಭೂಮಿ ಹಕ್ಕಿಗಾಗಿ ಮಂಜೂರಿ ಪ್ರಕ್ರೀಯೆಯಲ್ಲಿ, ಅರಣ್ಯ ಅತಿಕ್ರಮಣದಾರರು ಸಾಗುವಳಿಗೆ ಸಂಬAಧಿಸಿ ಜರುಗಿದ ಸರ್ವೇ ಕಾರ್ಯ ಪೂರ್ಣಪ್ರಮಾಣದಲ್ಲಿ ಗುರುತಿಸದೇ ಇರುವುದರಿಂದ, ಅರಣ್ಯ ಸಿಬ್ಬಂದಿಗಳು ಗಡಿ ಗುರುತಿಸುವ ಸಂದರ್ಭದಲ್ಲಿ
ಅರಣ್ಯ ಅತಿಕ್ರಮಣದಾರರ ಸಾಗುವಳಿಗೆ ಆತಂಕ ಉಂಟಾಗುವುದರಿAದ ಮತ್ತು ಅನಾಧಿಕಾಲದಿಂದ ಸಾಗುವಳಿ ಭೂಮಿ ಕಬ್ಜಾಕ್ಕೆ ಆತಂಕ ಆಗುವ ಹಿನ್ನೆಲೆಯಲ್ಲಿ ಅಸಮರ್ಪಕ ಜಿಪಿಎಸ್ಗೆ ಓಳಗಾಗಿರುವ ಅತಿಕ್ರಮಣದಾರರು ಮೇಲ್ಮನವಿ ಸಲ್ಲಿಸಬೇಕೆಂದು ಅವರು ಅಗ್ರಹಿಸಿದರು.
ಕಾರ್ಯಕ್ರಮದ ನೇತ್ರತ್ವವನ್ನ ಹೋರಾಟಗಾರರಾದ ಸುನೀಲ್ ನಾಯ್ಕ ಸಂಪಖAಡ, ಮೋಹನ ಬಿ ನಾಯ್ಕ, ಲೋಕೇಶ್ ಆರ್ ನಾಯ್ಕ, ರಾಮ ತಿಮ್ಮ ನಾಯ್ಕ, ವಿನಾಯಕ ಹುಕ್ಕಳಿ, ಗೋಪಾಲ ನಾಯ್ಕ ಮಾಸ್ತಿಹಕ್ಲು, ಶ್ರೀಧರ ನಾಯ್ಕ ಮುಂಡಿಗೆತಗ್ಗು, ಸುರೇಶ್ ನಾಯ್ಕ ಗಾಳಮಾಂವ ಮುಂತಾದವರು ವಹಿಸಿದ್ದರು.
ಉಚಿತ ಮೇಲ್ಮನವಿ:
ಅರಣ್ಯವಾಸಿಗಳ ಸಾಗುವಳಿ ಭೂಮಿಗೆ ಸಂಬoಧಿಸಿ ಅಸಮರ್ಪಕ ಜಿಪಿಎಸ್ ಆಗಿರುವ ಹಿನ್ನೆಲೆಯಲಿ,್ಲ ಅರಣ್ಯವಾಸಿಗಳ ಹಿತ ಕಾಪಾಡುವ ದೃಷ್ಠಿಯಿಂದ ಹೋರಾಟಗಾರರ ವೇದಿಕೆಯು ಜಿಲ್ಲಾದ್ಯಂತ ಉಚಿತ ಕಾನೂನಾತ್ಮಕ ಮೇಲ್ಮನವಿ ಕಾರ್ಯ ಜರುಗಿಸುತ್ತಿದ್ದು, ಅರಣ್ಯವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾಧ್ಯಕ್ಷರವೀಂದ್ರನಾಯ್ಕ ತಿಳಿಸಿದರು.
More Stories
ಅಪರೂಪದ ದೇವಾಲಯ. ಬಲಮುರಿ, ತ್ರಿನೇತ್ರ, ಆರುಕೈಗಳುಳ್ಳ ಮಹಾ ಗಣಪತಿ
ಜನಮನ ಸೂರೆಗೊಂಡ ನಾಣಿಕಟ್ಟಾ ಯಕ್ಷಗಾನ ಹಿಮ್ಮೇಳ ವೈಭವ.
ನಿಲ್ಕುಂದ- ಸಂತೆಗುಳಿ ಸರ್ವಋತು ರಸ್ತೆಗೆ ನಿರ್ಲಕ್ಷö್ಯ ;
ಹೋರಾಟಕ್ಕೂ ಸ್ಪಂಧಿಸದ ಸರಕಾರ- ರವೀಂದ್ರನಾಯ್ಕ.