April 19, 2024

Bhavana Tv

Its Your Channel

ಕೋಡಿಗದ್ದೆಯಲ್ಲಿ ನ. 23 ರಂದು ಅರಣ್ಯ ರಕ್ಷಿಸುವಲ್ಲಿ ಅರಣ್ಯವಾಸಿಗಳ ಜವಬ್ದಾರಿ ಚಿಂತನ ಕೂಟ.

ಸಿದ್ಧಾಪುರ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಯುವ ವೇದಿಕೆಯ ಸಿದ್ಧಾಪುರ ಘಟಕದ ಆಶ್ರಯದಲ್ಲಿ ದೋಡ್ಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಡಿಗದ್ದೆಯಲ್ಲಿನವೆಂಬರ್ 23, ಮಧ್ಯಾಹ್ನ 3 ಗಂಟೆಗೆ ಶಂಭುಲಿAಗೇಶ್ವರ ಮಹಿಸಾಸುರ ಮರ್ದಿನಿ ದೇವಾಲಯದಲ್ಲಿ ಚಿಂತನ ಸಭೆ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಯುವ ವೇದಿಕೆ ಪ್ರಕಟಣೆಯಲ್ಲಿತಿಳಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ವಿಷಯ ಮಂಡನೆಯನ್ನು ಕ್ಯಾದಗಿ ವಲಯ ಅರಣ್ಯ ಅಧಿಕಾರಿ ಅಜಯ್ ಕುಮಾರ್ ಮಾಡುವರು, ವಿಶೇಷ ಆಮಂತ್ರಿತರಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆದ್ಯಕ್ಷ ರವೀಂದ್ರ ನಾಯ್ಕ ಆಗಮಿಸುವರು, ಮುಖ್ಯ ಅತಿಥಿಗಳಾಗಿ ವಿನಾಯಕ ಆರ್ ನಾಯ್ಕ ಅಧ್ಯಕ್ಷರು ಬಿಎಸ್‌ಎನ್‌ಡಿಪಿ ತಾಲೂಕ ಘಟಕ ಸಿದ್ಧಾಪುರ, ವಸಂತ ನಾಯ್ಕ, ಸುಬ್ರಾಯ ಭಟ್ಟ ಗಡಿಹಿತ್ಲು, ಶ್ರೀಧರ ಭಟ್ಟ ಗಡಿಹಿತ್ಲು ಸಾಮಾಜಿಕ ಹೋರಾಟಗಾರರು, ಶ್ರೀಕಾಂತ ಫಾರೆಸ್ಟ ಆಫೀಸರ್ ಕೋಡಿಗದ್ದೆ ವಲಯ, ಇಸ್ಮಾಯಿಲ್ ಫಾರೆಸ್ಟ ಗಾರ್ಡ ಕೋಡಿಗದ್ದೆ
ವಲಯ ಇವರುಗಳು ಆಗಮಿಸುವರು.
ಅರಣ್ಯವಾಸಿಗಳಿಗೆ ಭೂಮಿ ಹಕ್ಕಿನ ಕುರಿತು ತಿಳುವಳಿಕೆ, ಜಾಗೃತೆ, ಮಾಹಿತಿ ನೀಡುವ ಜೊತೆಗೆ ಅರಣ್ಯ ರಕ್ಷಿಸುವಲ್ಲಿ ಅರಣ್ಯವಾಸಿಗಳ ಜಬಬ್ದಾರಿ ಕುರಿತು ಜಾಗೃತೆ ಮೂಡಿಸುವ ಉದ್ದೇಶದಿಂದ ಚಿಂತನ ಸಭೆ ಸಂಘಟಿಸಲಾಗಿದ್ದು ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರಾರರು ಆಗಮಿಸಬೇಕೆಂದು ಕಾರ್ಯಕ್ರಮದ
ಸಂಯೋಜಕರಾದ ನಾಗರಾಜ ಎಲ್ ಮರಾಠಿ, ಧನಂಜಯ ಎಸ್ ನಾಯ್ಕ ಪ್ರಕಟಣೆಯಲ್ಲಿತಿಳಿಸಿದ್ದಾರೆ.

error: