March 22, 2024

Bhavana Tv

Its Your Channel

ಅರಣ್ಯವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ;ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಜಿಲ್ಲೆಯೆಂದು ಘೋಷಿಸಿ- ರವೀಂದ್ರನಾಯ್ಕ.

ಸಿದ್ಧಾಪುರ: ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಪರಿಹಾರಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನ ಗುಡ್ಡಗಾಡು ಜಿಲ್ಲೆಯೆಂದು ಘೋಷಿಸಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಬಗೆಹರಿಸಲು ಸರಕಾರ ಕ್ರಮ ಜರುಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರವೀಂದ್ರನಾಯ್ಕ ಪ್ರಕಟಣೆಯಲ್ಲಿತಿಳಿಸಿದರು.
ಅವರು ಇಂದು ಸಿದ್ಧಾಪುರ ತಾಲೂಕ, ದೋಡ್ಮನೆ ಗ್ರಾಮ ಪಂಚಾಯತ ವ್ಯಾಪ್ತಿಯ, ಕೋಡಿಗದ್ದೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಯವ ವೇದಿಕೆಯ ಆಶ್ರಯದಲ್ಲಿ “ಅರಣ್ಯ ರಕ್ಷಿಸುವಲ್ಲಿ ಅರಣ್ಯವಾಸಿಗಳ ಜವಬ್ದಾರಿ” ಚಿಂತನ ಕೂಟದಲ್ಲಿ
ಭಾಗವಹಿಸಿ ಮಾತನಾಡುತ್ತಿದ್ದರು.ಅರಣ್ಯವನ್ನ ರಕ್ಷಿಸುವುದು ಅರಣ್ಯ ಇಲಾಖೆಗೆ ಮಾತ್ರ ಸಂಬAಧಿಸಿದ್ದಲ್ಲ.

ಅರಣ್ಯವಾಸಿಗಳು ಅರಣ್ಯ ರಕ್ಷಣೆಯ ಜೊತೆಯಲ್ಲಿಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿ ಮಾಡುವ ಜೊತೆಯಲ್ಲಿಯೇ ಜೀವನ ನಿರ್ವಹಿಸಬೇಕಾಗಿರುವುದರಿಂದ ಇಂದು ಅರಣ್ಯವು ಅರಣ್ಯವಾಸಿಗಳಿಗೆ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಶ್ರೀಧರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮ ಪಂಚಾಯತ ಅಧ್ಯಕ್ಷರು ಸುಬ್ರಾಯ ಭಟ್ಟ ಗಡಿಹಿತ್ಲು ಮಾತನಾಡುತ್ತಾ ಅರಣ್ಯ ಭೂಮಿ ಹಕ್ಕು ಮಂಜೂರಿ ನೀಡಿ, ಅರಣ್ಯವಾಸಿಗಳಿಗೆ ನ್ಯಾಯ ಒದಗಿಸಿಕೊಡಬೇಕು, ಅಲ್ಲದೇ ಅರಣ್ಯ ಸಿಬ್ಬಂದಿಗಳಿoದ ಉಂಟಾಗುವ ಸಮಸ್ಯೆಗಳಿಗೆ ಸರಕಾರ ಸ್ಫಂದಿಸಬೇಕೆAದು
ಹೇಳಿದರು.
ಕಾರ್ಯಕ್ರಮದಲ್ಲಿ ವಿನಾಯಕ ಆರ್ ನಾಯ್ಕ ಅಧ್ಯಕ್ಷರು ಬಿಎಸ್‌ಎನ್‌ಡಿಪಿ ತಾಲೂಕ ಘಟಕ ಸಿದ್ಧಾಪುರ, ಉದಯ ಸುಬ್ರಾಯ ಮರಾಠಿ ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರು, ಗಾಯತ್ರಿ ಚಂದ್ರು ನಾಯ್ಕ ಗ್ರಾಮ ಅರಣ್ಯ ಹಕ್ಕು ಸಮಿತಿ ಕಾರ್ಯದರ್ಶಿ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದರು. ಸಂಯೋಜಕರಾದ ನಾಗರಾಜ ಎಲ್ ಮರಾಠಿ, ಧನಂಜಯ ಎಸ್ ನಾಯ್ಕ ಕಾರ್ಯಕ್ರಮವನ್ನ ಸಂಘಟಿಸಿದ್ದರು. ಮಂಜು ನಾಯ್ಕ, ಯಲ್ಲು ಕೂರ ಮರಾಠಿ, ನಾರಾಯಣ ಮೈಲಾ ನಾಯ್ಕ, ಪರಮ ಕೋಮ ಮರಾಠಿ ಮತ್ತುಊರ ನಾಗರಿಕರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.

error: