ಶಿರಸಿ: ಪತ್ರಿಕೋದ್ಯಮದಲ್ಲಿ ತೊಡಗಿಕೊಂಡವರಿಗೆ ನೆರವಾಗುವ, ಮಾಧ್ಯಮದ ಘನತೆ ಹೆಚ್ಚಿಸುವ ಕಾರ್ಯ ಸಾಂಘಿಕವಾಗಿ ಆಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಕಳವೆ ಹೇಳಿದರು.
ಅವರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಪಾಲ್ಗೊಂಡು ಮಾತನಾಡಿದರು.
ಉತ್ತರ ಕನ್ನಡದ ಪತ್ರಿಕೋದ್ಯಮಕ್ಕೆ ಅದರದ್ದೇ ಆದ ಘನತೆ ಇದೆ. ಅದನ್ನು ಉಳಿಸಿ ಬೆಳೆಸಬೇಕು. ಜಿಲ್ಲೆಯ ಹಾಗೂ ಮಾಧ್ಯಮ ಅಭ್ಯುದಯದತ್ತ ಸಾಗಬೇಕು ಎಂದು ಹೇಳಿದರು.
ಇಂದು ಮಾಧ್ಯಮ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದ ಅವರು, ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡವರು ಬೆಳೆಯಬೇಕು. ಓದಬೇಕು. ಜ್ಞಾನ ವಿಸ್ತರಿಸಿಕೊಳ್ಳಬೇಕಿದೆ. ಜ್ಞಾನ ಹೆಚ್ಚಿಸುವ ಕಾರ್ಯ ಮಾಡಬೇಕಿದೆ ಎಂದರು.
ನೂತನ ಅಧ್ಯಕ್ಷ ಜಿ.ಸುಬ್ರಾಯ ಭಟ್ಟ ಭಕ್ಕಳ ಮಾತನಾಡಿ ಎಲ್ಲರೂ ಸೇರಿ ರಚನಾತ್ಮಕ ಕಾರ್ಯ ಮಾಡಬೇಕು ಎಂದರು.
ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ, ಕೋವಿಡ್ ಕಾಲದಲ್ಲಿ ಸಂಘದ ಚಟುವಟಿಕೆಯಲ್ಲಿ ಕೊರತೆ ಆದರೂ ಉತ್ತಮ ಕಾರ್ಯ ನಿರ್ವಹಿಸಿದ್ದೇವೆ ಎಂಬ ಭಾವನೆ ಇದೆ. ೧೯೭೪ರಿಂದ ಸಕ್ರೀಯವಾಗಿ ಕಾರ್ಯ ಮಾಡಿದ್ದೇವೆ ಎಂದರು.
ಪ್ರಮುಖರಾದ ಪ್ರದೀಪ ಶೆಟ್ಟಿ, ವಿಠಲದಾಸ್ ಅಂಕೋಲಾ, ಬಸವರಾಜ್ ಪಾಟೀಲ ಮುಂಡಗೋಡ, ಗುರು ಅಡಿ, ಪ್ರದೀಪ ಶೆಟ್ಟಿ, ಅನಂತ ದೇಸಾಯಿ, ನಾಗರಾಜ ಭಟ್ಟ ಕೆಕ್ಕಾರ, ಭವಾನಿಶಂಕರ, ಸುಮಂಗಲಾ ಹೊನ್ನೆಕೊಪ್ಪ, ನರಸಿಂಹ ಸಾತೊಡ್ಡಿ ಇತರರು ಇದ್ದರು.
More Stories
ಬಿಜೆಪಿ ನಾಯಕರು ನಡೆಸಿಕೊಂಡ ರೀತಿಗೆ ಬೇಸರಗೊಂಡು ಕಾಂಗ್ರೆಸ್ ಸೇರಿದ್ದೇವೆ: ವಿವೇಕ್ ಹೆಬ್ಬಾರ್
ಮಲಗಿದ್ದವರ ಮೇಲೆ ಹರಿದ ಕಾರು : ಮಗು ಸೇರಿ ಇಬ್ಬರು ಗಂಭೀರ
ಸ್ವರ್ಣವಲ್ಲಿ ಸ್ವಾಮಿಗಳ ಆಶೀರ್ವಾದ ಪಡೆದ ಡಾ|| ಅಂಜಲಿ