March 29, 2024

Bhavana Tv

Its Your Channel

ನಂದೊಳ್ಳಿ ಗ್ರಾ.ಪಂ. ವತಿಯಿಂದ ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮಿ ಸಿದ್ದಿಯವರಿಗೆ ಸನ್ಮಾನ.

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ನಂದೋಳ್ಳಿಯವರು ಊರಿಗೆ ಮರಳಿ ಬಂದಾಗ ನಂದೊಳ್ಳಿ ಗ್ರಾಮ ಪಂಚಾಯತ ವತಿಯಿಂದ ಲಕ್ಷ್ಮಿ ಸಿದ್ದಿ ಯವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಗ್ರಾಮ ಪಂಚಾಯತ ಅಧ್ಯಕ್ಷರಾದ ನರಸಿಂಹ ಕೋಣೆಮನೆಯವರು ನಂದೋಳ್ಳಿ ಗ್ರಾಮ ಪಂಚಾಯತ ಆವಾರದಲ್ಲಿ ಲಕ್ಷ್ಮೀ ಸಿದ್ದಿಯವರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ನಂತರ ಮಾತನಾಡಿ ಲಕ್ಷ್ಮೀ ಸಿದ್ದಿ ಅವರ ನಿಸ್ವಾರ್ಥ ಸೇವೆಯಿಂದ ನಂದೊಳ್ಳಿ ಗ್ರಾಮದ ಹೆಸರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರ ಸೇವೆ ನಿರಂತವಾಗಿರಲಿ ಎಂದು ಶುಭ ಹಾರೈಸಿದರು. ನಂದೊಳ್ಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುನಾಥ ಆಗೇರ, ವಿ.ಪ ಸದಸ್ಯ ಶಾಂತಾರಾಮ ಸಿದ್ಧಿ ಅವರ ಆಪ್ತ ಕಾರ್ಯದರ್ಶಿ ಭಾಸ್ಕರ ಸಿದ್ಧಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: