April 19, 2024

Bhavana Tv

Its Your Channel

ಜೋನ್ ಪಿ ಡಿಸೋಜ ನಿಧನ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನ ಕಟ್ಟಾದ ಜನಾನುರಾಗಿ ಜೋನ್ ಪಿ ಡಿಸೋಜ ರವರು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಅವರು ಕುಂದರಗಿ ಗ್ರಾಮ ಪಂಚಾಯತದ ಮಾಜಿ ಉಪಾಧ್ಯಕ್ಷರಾಗಿ,ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ ಪಕ್ಷದ ಕುಂದರಗಿ ಘಟಕದ ಅಧ್ಯಕ್ಷರಾಗಿ,ಪಕ್ಷದ ವಿವಿಧ ಸೆಲಗಳಲ್ಲಿಯೂ ಕೆಲಸ ನಿರ್ವಹಿಸಿದ್ದರು.ಪಕ್ಷದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ್ದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಆಗಿದ್ದರು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ಹಾನಿಯಾಗಿದೆ ಅವರ ಆತ್ಮಕ್ಕೆ ಭಗವಂತ ಶಾಂತಿಕೊಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಕಾರ್ಮಿಕ ಇಲಾಖೆಯ ಸಚಿವರು,ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ,ಮಾಜಿ ಸಚಿವ,ಹಾಲಿ ಶಾಸಕರಾದ ಆರ್.ವಿ.ದೇಶಪಾಂಡೆ, ಪ್ರಶಾಂತ ದೇಶಪಾಂಡೆ, ವೇಣುಗೋಪಾಲ ಮದ್ಗುಣಿ,ಟಿ.ಸಿ.ಗಾಂವಕರ,ಆರ್.ಎನ್.ಗೋರ್ಸಗದ್ದೆ, ಪ್ರೇಮಾನಂದ ನಾಯ್ಕ, ಅಧ್ಯಕ್ಷರಾದ ಡಿ.ಎನ್.ಗಾಂವಕರ,ಉಲ್ಲಾಸ ಶಾನಭಾಗ,ರವಿ ನಾಯ್ಕ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.

error: