April 26, 2024

Bhavana Tv

Its Your Channel

ಕವಡಿಕೇರಿ ಗ್ರಾಮ ಅರಣ್ಯ ಸಮಿತಿಯಿಂದ ಸೌಲಭ್ಯ ವಿತರಣೆ ಹಾಗೂ ಸನ್ಮಾನ

ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಯಲ್ಲಾಪುರ ತಾಲೂಕಿನ ಕವಡಿಕೇರಿ ಗ್ರಾಮ ಅರಣ್ಯ ಸಮಿತಿ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರವರು “ಕವಡಿಕೇರಿ ಗ್ರಾಮ ಅರಣ್ಯ ಸಮಿತಿ”ಯವರು ಸುಗಮಗಾರ ಕಿಶೋರ ನಾಯ್ಕ, ಕಾರ್ಯದರ್ಶಿ ಅಲ್ತಾಪ ಚೌಕಡಾಕ, ಅರಣ್ಯ ರಕ್ಷಕ ನಾಗಪ್ಪ ಕುಂದರಗಿರವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಎಲ್.ಎಸ್.ಎಂ ಪಿ. ಅಧ್ಯಕ್ಷರಾದ ನಾಗರಾಜ ಕವಡಿಕೇರಿ, ವಿಶ್ವದರ್ಶನ ಶಾಲೆಯ ನಿರ್ದೇಶಕರು,ನಂದೋಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನರಸಿಂಹ ಕೋಣೆಮನೆ,ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷರಾದ ಆರ್.ಎಸ್. ಭಟ್ಟ ಮುಂತಾದವರು ಉಪಸ್ಥಿತರಿದ್ದರು.

error: