March 22, 2024

Bhavana Tv

Its Your Channel

ಪಟ್ಟಣ ಅಭಿವೃದ್ಧಿಯಾದರೆ ಜನರ ಸಮಸ್ಯೆ ದೂರವಾದ ಹಾಗೆ – ಸುನಂದಾ ದಾಸ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.ಆನಗೋಡ ಹಾಗೂ ನಂದೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ರಸ್ತೆಯಲ್ಲಿ ನಗರದ ಕಸಕಡ್ಡಿ, ತ್ಯಾಜ್ಯಗಳನ್ನು ತಂದು ಒಗೆಯುತ್ತಿದ್ದು ಇದರಿಂದ ರೋಗಿ,ರುಜಿನಗಳು ಹೊರಡುವ ಸಂಭವವಿದೆ.ಇದನ್ನು ನಿಲ್ಲಿಸುವ ಬಗ್ಗೆ ಚರ್ಚೆ ನಡೆಯಿತು. ಬರುವ ಫೇಬ್ರವರಿ-ಮಾರ್ಚನಲ್ಲಿ ಜಾತ್ರೆ ನಡೆಯಲಿದ್ದು ಇದರ ಕುರಿತು ಈಗಿನಿಂದಲೇ ತಯಾರಿಮಾಡಬೇಕು.ವಿಶೇಷ ಅನುದಾನಕ್ಕೆ ಸಭೆಯು ಠರಾಯಿಸಿತು. ನಗರದಲ್ಲಿ ನಡೆಯುತ್ತಿರುವ ಕೆಲವು ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಅದನ್ನು ನಿಲ್ಲಿಸಲು ಪಟ್ಟಣ ಪಂಚಾಯತ ಸದಸ್ಯ ಕೈಸರವರು ಆಗ್ರಹಿಸಿದರು.
ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಕಡಿಮೆ ಬೀಳುವ ಅನುದಾನವನ್ನು ವಿವಿಧ ಮೂಲಗಳಿಂದ ಕ್ರೋಢೀಕರಿಸಿ, ಭರಿಸುವ ಬಗ್ಗೆ ಅನುಮೋದನೆ ನೀಡಲಾಯಿತು.ಮುಖ್ಯಾಧಿಕಾರಿ ಸಂಗನಬಸಯ್ಯ ಉಪಾಧ್ಯಕ್ಷರಾದ ಶ್ಯಾಮಿಲಿ ಪಾಟಣಕರ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಆದಿತ್ಯ ಗುಡಿಗಾರ, ರಾಧಾಕೃಷ್ಣ ನಾಯ್ಕ,ರವಿ ಪಾಟಣಕರ, ಹಾಗೂ ಸದಸ್ಯರು ಉಪಸ್ಥಿತರಿದ್ದರು.

error: