March 29, 2024

Bhavana Tv

Its Your Channel

ಯಲ್ಲಾಪುರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಯಲ್ಲಾಪುರ ; ತಾಲೂಕಿನ ಆನಗೋಡದಲ್ಲಿ ಫೆ.4 ರಂದು ನಡೆಯಲಿರುವ ಐದನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಶಾಸಕರ ಭವನದಲ್ಲಿ ಬಿಡುಗಡೆ ಗೊಳಿಸಿದರು.

ನಂತರ ಮಾತನಾಡಿದ ಅವರು,” ಕನ್ನಡ ನಾಡು,ನುಡಿಯ ಬಗೆಗೆ ಬದ್ದತೆ, ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮ್ಮೇಳನ ಸಹಾಯಕಾರಿ ಯಾಗಿದೆ.ಸಮ್ಮೇಳನ ಯಶಸ್ವಿಗೊಳಿಸಲು ಕನ್ನಡದ ಎಲ್ಲ ಸುಮನಸರು ಸಹಕರಿಸಬೇಕು” ಎಂದರು.
ಸAದರ್ಭದಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ವಿದ್ವಾನ ಸುಬ್ರಮಣ್ಯ ಭಟ್ಟ, ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ,ತಹಶಿಲ್ದಾರ ಶ್ರೀಕೃಷ್ಣ ಕಾಮ್ಕರ, ತಾಲೂಕು ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಜಗದೀಶ ಕಮ್ಮಾರ, ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ,ಪ್ರಮುಖರಾದ ಬೀರಣ್ಣ ನಾಯಕ ಮೊಗಟಾ,ಸುಮಂಗಲಾ ಹನುಮ ರೆಡ್ಡಿ,ಡಿ.ಜಿ.ಹೆಗಡೆ,ಪ್ರಕಾಶ ನಾಯಕ,ಶಿರೀಷ ಪ್ರಭು,ಸುಬ್ರಾಯ ಗಾಂವ್ಕಾರ ಬಿದ್ರೆಮನೆ, ಡಾ.ರವಿ ಭಟ್ಟ ಬರಗದ್ದೆ,ಜಿ.ಎನ್.ಭಟ್ಟ ತಟ್ಡಿಗದ್ದೆ,ಜಿ.ಆರ್.ಹೆಗಡೆ,ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಮುಂತಾದ ವರು ಇದ್ದರು.

error: