ವಿಜಯಪೂರ ; ಜಿಲ್ಲೆಯ ಇಂಡಿ ತಾಲ್ಲೂಕಿನ ಚವಡಿಹಾಳ ಗ್ರಾಮದಲ್ಲಿಂದು ಶ್ರೀ ಕಲ್ಮೇಶ್ವರ ದೇವಸ್ಥಾನ ಆವರಣದಲ್ಲಿ ಕೋವಿಡ್ ವಿರುದ್ಧದ ಸಮರಕ್ಕೆ ೪೫ ವರ್ಷ ಮೇಲ್ಪಟ್ಟ ವಯಸ್ಕರರಿಗೆ ಕೋವ್ಯಾಕ್ಷಿನ್ ಲಸಿಕೆಯನ್ನು ನೀಡಲಾಯಿತು…
ಈ ವೇಳೆ ಮಾತನಾಡಿದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚನಗೊಂಡ ಪಾರೆ ಅವರು, ದೇಶದಿಂದ ಕೊರೋನಾ ವೈರಸ್ ತೋಲಗಿಸುವ ಹಾಗೂ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸದ್ಯ ೪೫ ವರ್ಷ ವಯಸ್ಕರರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಎಲ್ಲರೂ ಲಸಿಕೆಯನ್ನು ಪಡೆಯುವ ಮೂಲಕ ಕೋವಿಡ್ ದೂರವಿಡಲು ಸಹಕರಿಸೋಣ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು…
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ದಿಲಶದಬಿ. ಗ್ರಾ.ಪಂ ಸದಸ್ಯ ಕಾಮಣ್ಣ ದಶವಂತ, ಸಂಜು ಮಲ್ಲಾಡಿ, ನಾಗಪ್ಪ ತೊಂಡಿಕಟ್ಟಿ, ಎಮ್.ಬಿ ಬಿರಾದಾರ ಹಾಗೂ ಆಶಾ ಕಾರ್ಯಕರ್ತೆಯರು-ಆರೋಗ್ಯ ಇಲಾಖೆಯವರು ಉಪಸ್ಥಿತರಿದ್ದರು..
ವರದಿ ಬಿ ಎಸ್ ಹೊಸೂರ.ವಿಜಯಪೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ