April 24, 2024

Bhavana Tv

Its Your Channel

ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಇರಿಸಿಕೊಂಡಿದ್ದ ಆರೋಪಿತನ ಬಂಧನ.

ವಿಜಯಪೂರ.; ಕಂಟ್ರಿ ಪಿಸ್ತೂಲ್ ಇರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಇಂಡಿ ಗ್ರಾಮೀಣ ಪೋಲಿಸರು ಯಶಸ್ವಿಯಾಗಿದ್ದಾರೆ ಬಂಧಿತ ಆರೋಪಿಯನ್ನು ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಲೋಣಿ ಕೆಡಿ ಗ್ರಾಮದ ಮಹಾದೇವ ಅಣ್ಣೇಶ ಉರ್ಪ ಅಣ್ಣಾರಾಯ ಪಾಂಡ್ರೆ (೩೭) ಗುರುತಿಸಲಾಗಿದೆ.

ಆರೋಪಿಯ ಬಳಿ ಒಂದು ಪಿಸ್ತೂಲ್ ನಾಲ್ಕು ಜೀವಂತ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಜಪ್ತಿಮಾಡಿದ ಕಂಟ್ರಿ ಪಿಸ್ತೂಲಿನ ಕಿಮ್ಮತ್ತು೩೦.೦೦೦.ಸಾವಿರ ರೂಪಾಯಿಗಳು, ನಾಲ್ಕು ಜೀವಂತ ಗುಂಡುಗಳು ಅವುಗಳ ಮೊತ್ತ ೧೦೦೦ ಸಾವಿರ ರೂಪಾಯಿಗಳ ಕಿಮ್ಮತ್ತು ಇರುತ್ತವೆ, ಕಳೆದ ದಿನಾಂಕ ೧೮-೬-೨೦೨೧ರಂದು ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ರೌಡಿ ಪರೆಡ್ ನಡೆಸಲಾಗಿತ್ತು ಈ ಸಂಧರ್ಭದಲ್ಲಿ ಆರೋಪಿಯ ಚಲನ ವಲನದ ಮೇಲೆ ನಿಗಾ ಇರಿಸಲಾಗಿತ್ತು.

ಈ ಆರೋಪಿಯ ಬಳಿ ಕಂಟ್ರಿ ಪಿಸ್ತೂಲ್ ಇರುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೋಲಿಸ್ ಅಧಿಕ್ಷಕ ಅನುಪಮ ಅಗರವಾಲ್ .ಡಿವೈಎಸ್ಪಿ ಶ್ರೀಧರ ದೊಡ್ಡಿ.ಸಿಪಿಐ ರವರ ಮಾರ್ಗದರ್ಶನದಲ್ಲಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ ಐ ಮಾಳಪ್ಪ ಪೂಜಾರಿ, ಸಿಬ್ಬಂದಿಗಳಾದ ಆರ್ ಪಿ ಗಡೇದ, ಎಸ್ ಪಿ ಕಾಂಬಳೆ, ಆರ್ ಎಮ್ ಬಿರಾದಾರ, ಎಸ್ ಎ ಬಂದಲಗಿ, ಮೊದಲಾದವರ ತಂಡ ದಾಳಿ ನಡೆಸಿ ಆರೋಪಿಯನ್ನು ದಿನಾಂಕ ೨೦-೬-೨೦೨೧ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತೆದೆ ಎಂದು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ ಐ ಮಾಳಪ್ಪ ಪೂಜಾರಿ ಅವರು ಇಂದು ಮಾಧ್ಯಮದವರಿಗೆ ಮಾಹಿತಿ ತಳಿಸಿದ್ದಾರೆ.

ವರದಿ ಬಿ ಎಸ್ ಹೊಸೂರ.ಇಂಡಿ

error: