ವರದಿ ಬಿ ಎಸ್ ಹೊಸೂರ.
ವಿಜಯಪೂರ: ಹೆತ್ತ ತಂದೆಯನ್ನೇ ಶಿಕ್ಷಕ ಮಗನೋರ್ವ ಮನೆಯಿಂದ ಆಚೆಗೆ ಹಾಕಿರುವ ಘಟನೆ ನಡೆದಿದೆ.ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ವಿದ್ಯಾನಗರದ ನಿವಾಸಿ ಕುಪೇಂದ್ರ ಆನೂರನ ಪುತ್ರ ಭೀಮಾಶಂಕರ ಆನೂರ ಹೊರ ಹಾಕಿದ್ದಾರೆ.
ಕಳೆದ ಐದಾರೂ ದಿನಗಳಿಂದ ಅನ್ನ ನೀರಿಲ್ಲದೇ ತಂದೆ ಕುಪೇಂದ್ರ ಪರದಾಡುತ್ತಿದ್ದರು ಮಗ ಹಾಗೂ ಸೊಸೆ ಮಾತ್ರ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಇನ್ನು ಮಗ ಭೀಮಾಶಂಕರ ಮತ್ತು ಸೊಸೆ ಸಾವಿತ್ರಿ ಗಬ್ಬೂರ ಇಬ್ಬರೂ ವೃತ್ತಿಯಲ್ಲಿ ಶಿಕ್ಷಕರಾಗಿದ್ರೂ ಆಸ್ತಿ ಹಾಗೂ ಹಣದ ವ್ಯಾಮೋಹದಿಂದ ತಂದೆ ತಾಯಿಯನ್ನು ನಿರ್ಲಕ್ಷ್ಯಿಸಿ ಮನೆಯಿಂದ ಹೊರ ಹೊರಹಾಕೀದ್ದಾರೆ.
ಅಲ್ಲದೇ, ತಂದೆ ವೃತ್ತಿಯಲ್ಲಿ ಅನ್ನದಾತ ಅನಕ್ಷರಸ್ಥ. ಇದೀಗ ತಂದೆಯೇ ಶಿಕ್ಷಕ ಮಗನ ಮನೆ ಎದುರು ಧರಣಿ ನಡೆಸುವ ಸಂದರ್ಭ ಬಂದಿದೆ. ಇನ್ನು ತಾಯಿಯ ಆರೈಕೆಗಾಗಿ ಹಣ ನೀಡುವಂತೆ ಮಗನ ಮನೆಯ ಎದುರು ಧರಣಿ ಮಾಡುತ್ತಿದ್ರೂ ಭೀಮಾಶಂಕರ ಮಾತ್ರ ಕ್ಯಾರೆ ಅಂದಿಲ್ಲ. ಮನೆಯಿಂದ ಹೊರ ಹೋಗುವಂತೆ ತಂದೆಯ ಮೇಲೆ ಮಗ ಹಲ್ಲೆಗೈದಿದ್ದಾನೆ. ಈ ಕುರಿತು ದೂರು ನೀಡಲು ಹೋದ್ರೂ ಪೊಲೀಸರು ಕೂಡ ಪ್ರಕರಣ ತೆಗದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕಾಗಿ ನಮ್ಗೆ ನ್ಯಾಯ ಒದಗಿಸಿ ಎಂದು ಮಾಧ್ಯಮದ ಎದುರು ಅಳಲು ತೊಡಗಿಕೊಂಡಿದ್ದಾರೆ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ