April 19, 2024

Bhavana Tv

Its Your Channel

ಇಂಡಿ;ಸರಕಾರಿ ಕಛೇರಿಯಲ್ಲಿ ಕುಡಿದು ನಶೆಯಲ್ಲಿ ತೇಲಾಡುತ್ತಿರುವ ಶಿಕ್ಷಕ.

ವರದಿ ಬಿ ಎಸ್ ಹೊಸೂರ.

ವಿಜಯಪೂರ : ಶಿಕ್ಷಕ ಕುಡಿದ ನಶೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಆಗಮಿಸಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಎಚ್ ಪಿ ಎಸ್ ಪ್ರಾಥಮಿಕ ಶಾಲಾ ಶಿಕ್ಷಕ ಸಿದ್ರಾಮ್ ರಾಠೋಡ ಕುಡಿದ ನಶೆಯಲ್ಲಿ ಬಂದು ಕೋಟಿ ಕೋಟಿ ಹಣದ ಬಗ್ಗೆ ಮಾತನಾಡಿದ್ದಾನೆ ಅಲ್ಲದೇ ಬಿಇಓ ಕಚೇರಿಯ ಆವರಣದಲ್ಲಿರುವ ಕಟ್ಟೆಯ ಮೇಲೆ ಕುಳಿತುಕೊಂಡು ಹತ್ತು ಕೊಟಿಯ ಹಣದ ಬಗ್ಗೆ ಮಾತನಾಡಿದ ಶಿಕ್ಷಕನ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅದಕ್ಕಾಗಿ ಕುಡುಕ ಶಿಕ್ಷಕ ಸಿದ್ರಾಮ ರಾಠೋಡ ವಿರುದ್ಧ ಡಿಡಿಪಿಐ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ! ಇಷ್ಟಾದರೂ ಮೇಲಾಧಿಕಾರಿಗಳು ಕ್ರಮಕೈಗೊಳ್ಳುತ್ತಾರಾ ? ಎಂದು ಕಾದುನೊಡಬೇಕಾಗಿದೆ..

error: