April 24, 2024

Bhavana Tv

Its Your Channel

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಸಮಸ್ತ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಶ್ರೀ ಶಂಕರಲಿAಗ ಜೈ ಭವಾನಿ ಯುವಕ ಮಂಡಳಿ ವತಿಯಿಂದ ನವರಾತ್ರಿ ಉತ್ಸವ ಸಂದರ್ಭದಲ್ಲಿ ಒಂಬತ್ತು ದಿನಗಳವರೆಗೆ ಶಿವಶರಣೆ ಅಕ್ಕ ಮಹಾದೇವಿ ಪುರಾಣವು ಶ್ರೀ ಪಾಂಡುರAಗ ಮಹಾಸ್ವಾಮಿಗಳು ನೆರವೇರಿಸಿ ಕೊಟ್ಟರು. ಹಾಗೂ ವಿಶೇಷವಾಗಿ ಶ್ರೀ ಶಿವಬಸವರಾಜೇಂದ್ರ ಮಹಾಸ್ವಾಮಿಗಳು ಖೇಡಗಿ ಆಗಮಿಸಿದ್ದರು. ಸಕಲ ಕಾರ್ಯಕ್ರಮಗಳ ಸಾನಿದ್ಯ ಶ್ರೀ ಅಭಿನವ ಪ್ರಭುಲಿಂಗ ಮಹಾಸ್ವಾಮಿಗಳು ಅಗರಖೇಡ ಇವರು ವಹಿಸಿಕೊಂಡಿದ್ದರು. ಕೊನೆಯ ದಿನ ವಿಜಯ ದಶಮಿ ಯಂದು ಅಪ್ಪಣ್ಣ, ಕಲ್ಲಪ್ಪ, ಸಾವಳೆ, ಇವರು ಸಮಸ್ತ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೇರವೆರಿಸಿ ಕೊಟ್ಟರು. ಕನಿಷ್ಠ ೫೦೦ ರಿಂದ ೬೦೦ ಜನ ತಾಯಂದಿರು ಆಗಮಿಸಿ ಉಡಿ ತುಂಬಿಕೊAಡರು. ಅಗರಖೇಡ ಶ್ರೀ ಗಳು ಆಶಿರ್ವಚನ ನಡೆಯಿಸಿ ಕೊಟ್ಟಿದ್ದಾರೆ ಈ ಕಾರ್ಯಕ್ರಮವನ್ನು ಕೋವಿಡ ೧೯ ರ ಎಸ್ ಓ ಪಿ ನಿಯಮ ಪಾಲಿಸುವದರೊಂದಿಗೆ ಆಚರಿಸಲಾಗಿದೆ. ನಿರೂಪಣೆ ಶಿವಾನಂದ ವಠಾರ ಹಾಗೂ ವಂದನಾರ್ಪಣೆ ಪ್ರಮೋದ ಸಾವಳೆ ನೆರವೇರಸಿದರು

ವರದಿ ಬಿ ಎಸ್ ಹೊಸೂರ.

error: