ವಿಜಯಪುರ: ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಪ್ರತಿಯೊಂದು ಮನೆಗೆ ನೀರಿನ ನಲ್ಲಿ ಮಾಡುವ ವ್ಯವಸ್ಥೆಯಿಂದ ಪ್ರತಿಯೊಂದು ವಾಡ್೯ದಲ್ಲಿ ರಸ್ತೆಯ ಮಧ್ಯೆ ನೆಲ ಅಗೆದು ಪೈಪುಗಳನ್ನು ಜೋಡಿಸಿ ಸರಿಯಾಗಿ ಮುಚ್ಚದೆ ಇದ್ದ ಕಾರಣ ರಸ್ತೆಗಳು ಸಂಪೂರ್ಣವಾಗಿ ತಗ್ಗುಗಳಾಗಿ,ನೀರು ನಿಂತು ಸಾವ೯ಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.ಅಷ್ಟೇ ಅಲ್ಲದೆ ಅಕ್ಕ-ಪಕ್ಕದ ಮನೆಯವರು ಆ ರಸ್ತೆಯ ಸಮಸ್ಯೆಯಿಂದ ಜಗಳವಾಡುವ ಪರಿಸ್ಥಿತಿಯಾಗಿದೆ,ಈ ವಿಷಯ ಕುರಿತು ಪಂಚಾಯತ ಅಧಿಕಾರಿಗಳಿಗೆ , ಸದಸ್ಯರುಗಳಿಗೆ ಹೇಳಿದರೂ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ,ಒಂದು ವೇಳೆ ಸಂಬoಧಿಸಿದ ಅಧಿಕಾರಿಗಳು ತಮ್ಮ ಬೇಜವಾಬ್ದಾರಿತನ ತೊರಿಸಿದರೆ,ಮುಂದಿನ ದಿನಮಾನಗಳಲ್ಲಿ, ತಾಲೂಕಾ ಪಂಚಾಯತ್,ಜಿಲ್ಲಾಪoಚಾಯತ್ ಎದುರು ಪ್ರತಿಭಟನೆ ಮಾಡಲಾಗುವುದೆಂದು ದಲಿತ ಯುವ ಮುಖಂಡರಾದ ಶಿವು ನಾಟಿಕಾರ ಅವರು ಸಾವ೯ಜನಿಕರ ಪರವಾಗಿ ಆಗ್ರಹಿಸಿದ್ದಾರೆ.
ವರದಿ ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ