ವಿಜಯಪುರ: 2021 ನೇ ಸಾಲಿನ ಯುಪಿಎಸ್ ಸಿ ಪರೀಕ್ಷೆಯಲ್ಲಿ ದೇಶದಲ್ಲಿ 139ನೇ ರ್ಯಾಂಕ್ ಬಂದAತಹ
ತಾಳಿಕೋಟೆಯ ವಿದ್ಯಾನಗರದ ನಿವಾಸಿಯಾದ ನಿಖಿಲ್ ಪಾಟೀಲ್ ಇವರಿಗೆ ತಾಳಿಕೋಟೆಯ ವಿದ್ಯಾ ನಗರ ಬಡಾವಣೆ ನಿವಾಸಿಗಳಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಮಲ್ಲಿಕಾರ್ಜುನ ಅರಮನೆ ನೆರವೇರಿಸಿಕೊಟ್ಟರು. ನಂತರ ಕಾರ್ಯಕ್ರಮಕ್ಕೆ ಭಕ್ತಿಗೀತೆ ಶ್ರೀದೇವಿ ಕುಲಕರ್ಣಿ ಹಾಗೂ ಸುಧಾ ಸಕ್ರಿ ನೆರವೇರಿಸಿಕೊಟ್ಟರು. ನಿಖಿಲ್ ಪಾಟೀಲ್ಗೆ ಸನ್ಮಾನ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರಗಿದವು.
ತಮ್ಮ ಯಶಸ್ಸಿನ ಸ್ಪೂರ್ತಿಯನ್ನು ಬಿಚ್ಚಿಟ್ಟ ನಿಖಿಲ್ ನನ್ನ ಸಾಧನೆಗೆ ನಮ್ಮ ತಂದೆ ತಾಯಿಯ ನಿಜವಾದ ಕಾರಣ ಎಂದು ಹೇಳಿದರು. ಹಾಗೂ ಅವರ ಪಟ್ಟ ಕಷ್ಟದ ಪರಿಶ್ರಮವನ್ನು ಎಲ್ಲರಿಗೂ ತಿಳಿಸಿದರು ಎರಡು ಬಾರಿ ಫೇಲಾದರೂ ಮೂರನೇ ಬಾರಿ ಯಲ್ಲಿ ನನ್ನ ಉತ್ಸಾಹ ಕಡಿಮೆಯಾಗದೆ ಪರೀಕ್ಷೆಯಲ್ಲಿ ಕುಳಿತು ತೇರ್ಗಡೆಯಾಗಿ ದೇಶದಲ್ಲಿ 139 ನೇ ರಾಂಕ್ ಬಂದಿದ್ದೇನೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸನ್ಮಾನ ಮತ್ತು ಸ್ವಾಗತ ಭಾಷಣ ಸಾತಪ್ಪ ಗೊಂಗಡಿ, ಆನಂದ ಕುಲಕರ್ಣಿ, ರುದ್ರಗೌಡ ಎನ್ ಪಾಟೀಲ್, ಕಳಕೂಸ ರಂಗ್ರರೇಜ್,ರಾಹುಲ ಕಲಾಲ್, ಅಮೋಘ ಕುಲಕರ್ಣಿ, ಹಾಗೂ ಮಹಿಳೆಯರ ಆದಂತಹ ಶ್ರೀ ದೇವಿ ಕುಲಕರ್ಣಿ,ಮೀನಾಕ್ಷಿ ಮಾಮನಿ, ಅನುಶ್ರೀ ಕುಲಕರ್ಣಿ, ರೇಖಾ ರಂಗರೇಜ್, ದೀಪ ಬಿರಾದಾರ್ ಮತ್ತಿತರು ಉಪಸ್ಥಿತರಿದ್ದರು
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ