April 24, 2024

Bhavana Tv

Its Your Channel

ತಾಳಿಕೋಟೆಯಲ್ಲಿ ನಡೆದ ಹಿಂದೂ ಮಹಾಗಣಪತಿ ಭವ್ಯ ಶೋಭಾಯಾತ್ರೆ

ವಿಜಯಪುರ:- ತಾಳಿಕೋಟೆಯಲ್ಲಿ ಐತಿಹಾಸಿಕ ಹಿಂದೂ ಮಹಾಗಣಪತಿಯ ೯ನೇ ವರ್ಷದ ಭವ್ಯ ಶೋಭಾಯಾತ್ರೆ ಗುರುವಾರದಂದು ನಗರದುದ್ದಕ್ಕೂ ಜರುಗಿತು ಗಣೇಶ ಚತುರ್ಥಿಯಂದು ಪ್ರತಿಷ್ಠಾನ ಗೊಂಡಿದ್ದ ಗಣೇಶ ಒಂಬತ್ತು ದಿನಗಳ ಕಾಲ ಪೂಜೆ-ಪುನಸ್ಕಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು
ಒಂಬತ್ತನೆಯ ದಿನ ಮೆರವಣಿಗೆಯಲ್ಲಿ ಭಾರತಮಾತೆ ವೀರಸಾವರ್ಕರ, ಬಾಲಗಂಗಾಧರ ತಿಲಕ, ಭವ್ಯ ಫೋಟೋ ಮೆರವಣಿಗೆ ಹಾಗೂ ಗಣಪನ ಮೂರ್ತಿ ಮೆರವಣಿಗೆ ದಾರಿಯುದ್ದಕ್ಕೂ ಜರುಗಿತು ಹಿಂದೂ ಮಹಾಗಣಪತಿ ಭವ್ಯ ಮೆರವಣಿಗೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದರು
ದಾರಿಯಲ್ಲಿ ನಮ್ಮ ಗೆಳೆಯರ ಬಳಗ ವತಿಯಿಂದ ಕಡಬು ಪ್ರಸಾದವನ್ನು ಏರ್ಪಾಟು ಮಾಡಿದರು
ಹಾಗೆಯೇ ದಾರಿಯಲ್ಲಿ ಅನ್ನಪ್ರಸಾದ ಕೂಡ ವ್ಯವಸ್ಥೆ ಇತ್ತು ನಂತರ ಭವ್ಯ ಮೆರವಣಿಗೆ ನಂತರ ಗಣೇಶನ ವಿಸರ್ಜನೆ ಕಾರ್ಯಕ್ರಮ ನೆರವೇರಿತು

ವರದಿ: ಅಮೋಘ ತಾಳಿಕೋಟೆ

error: