April 23, 2024

Bhavana Tv

Its Your Channel

ಸೂರ್ಯಗ್ರಹಣ ಅಂಗವಾಗಿ ತಾಳಿಕೋಟೆಯಲ್ಲಿ ಗ್ರಹಣ ಶಾಂತಿಹೋಮ

ಬಾಗಲಕೋಟೆ:-ಖಂಡಗ್ರಾಸ ಕೇತುಗ್ರಸ್ತ ಸೂರ್ಯಗ್ರಹಣ ಅಂಗವಾಗಿ ತಾಳಿಕೋಟೆಯ ಪೊಲೀಸ್ ಸ್ಟೇಷನ್ ಆವರಣದ ಶ್ರೀ ಹನುಮಾನ್ ಮಂದಿರದಲ್ಲಿ ಗ್ರಹಣ ಶಾಂತಿಹೋಮ ಕಾರ್ಯಕ್ರಮ ಜರುಗಿತು.

ಹೋಮಕ್ಕಿಂತ ಪೂರ್ವದಲ್ಲಿ ಭಜನೆ ನಾಮಸ್ಮರಣೆಗಳು ಭಕ್ತರಿಂದಲೇ ಜರುಗಿದವು
ನಂತರ 5 ಗಂಟೆಯಿAದ ಗ್ರಹಣ ಮೋಕ್ಷ ಕಾಲದವರೆಗೂ ಗ್ರಹಣ ಶಾಂತಿ ಹೋಮ ನೆರವೇರಿಸಲಾಯಿತು

ಶ್ರೀ ಗುಂಡ ಭಟ್ಟಾಚಾರ್ಯ, ಶ್ರೀ ಸಂಜೀವ್ ಪುರೋಹಿತ್ಶ್ರೀ, ಶ್ರೀಧರ ಪುರೋಹಿತ್ ನೇತೃತ್ವದಲ್ಲಿ ಹೋಮ ನೆರವೇರಿತು ಹಾಗೂ ಶ್ರೀ ಆನಂದ್ ಕುಲಕರ್ಣಿ ಅವರಿಂದ ಶ್ರೀ ಸಾಯಿ ಸಹಸ್ರನಾಮವಳಿ ಪಠಿಸಲಾಯಿತು

ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರಾದ ಜಿ ಟಿ ಘೋರ್ಪಡೆ, ಆನಂದ ಕುಲಕರ್ಣಿ, ಕಾಶಿನಾಥ್ ಪಾಟೀಲ್,
ಲಕ್ಷ್ಮಣ, ಅಮೋಘ ಕುಲಕರ್ಣಿ, ಹಾಗೂ ಶ್ರೀದೇವಿ ಕುಲಕರ್ಣಿ, ಮೀನಾಕ್ಷಿ ನಾಮಿನಿ, ಅನುಶ್ರೀ ಕುಲಕರ್ಣಿ, ಹಾಗೂ ಸದ್ಭಕ್ತರು ಭಾಗವಹಿಸಿದ್ದರು

ವರದಿ: ಅಮೋಘ ಕುಲಕರ್ಣಿ

error: