April 20, 2024

Bhavana Tv

Its Your Channel

ಹಾಡು ಹಗಲೇ ವ್ಯಕ್ತಿಗೆ ಚಾಕುವಿನಿಂದ ಇರಿತ. ರಕ್ತಪಾತದಲ್ಲಿ ವ್ಯಕ್ತಿಯ ನರಳಾಟ

ವಿಜಯಪೂರ ; ಜಿಲ್ಲೆಯ ಇಂಡಿ ತಾಲೂಕಿನ ಕೊಳುರಗಿ ಗ್ರಾಮದಲ್ಲಿ ಗುರುವಾರ ಚಾಕು ಇರಿತಕ್ಕೆ ಹೊಟ್ಟೆಯ ವ್ಯಕ್ತಿಯ ಕರುಳು ಹೊರಬಂದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ತನಿಖೆ ನಡೆಸುತ್ತಿದ್ದಾರೆ
ಬೆಳಗ್ಗೆ ಸುಮಾರು ೯.೩೦ಗಂಟೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕೊಳುರಗಿ ಗ್ರಾಮದ ವ್ಯಕ್ತಿಯಾದ ಗೆನಪ್ಪಾ ಪರಸಪ್ಪ ಹರಿಜನ್ ಈ ವ್ಯಕ್ತಿಯು ತಮ್ಮ ಹೊಲಕ್ಕೆ ಹೋಗಿದ್ದಾಗ ಅಲ್ಲಿ ಅಪರಿಚಿತ ವ್ಯಕ್ತಿಗಳು ಇವರ ಮೇಲೆ ಎರಗಿ ಹೊಡೆದು ಬಡಿದು ಚಾಕುವಿನಿಂದ ಇರಿದು ಇವರನ್ನು ಬಿಟ್ಟು ಪರಾರಿಯಾಗಿದ್ದಾರೆ. ನಂತರ ವ್ಯಕ್ತಿಯೋರ್ವರು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ಮುಂದು ವರಿಸಿ ಗಂಭೀರವಾಗಿ ಗಾಯಗೊಂಡಿದ್ದ ಗೆನಪ್ಪ ಹರಿಜನ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ .
ಈ ಕೃತ್ಯ ಯಾರು ಎಸಗಿದ್ದಾರೆ ಎಂದು ಜಾಲ ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗೆನಪ ಹರಿಜನ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
ಬಸವರಾಜ ಇಂಡಿ

error: