April 19, 2024

Bhavana Tv

Its Your Channel

ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಯಾ ತಪ್ಪಿ ಬಿದ್ದು ಕಾರ್ಮಿಕ ಸುರೇಶ ಪೂಜಾರಿ ಸಾವು.

ವಿಜಯಪುರ: ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಯಾ ತಪ್ಪಿ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೊಂದು.ವಿಜಯಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದ ಕೆಪಿಆರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ .ಕೆಪಿಆರ್ ಸಕ್ಕರೆ ಕಾರ್ಖಾನೆಯ ಕಾರ್ಮಿಕ ಹಾಗೂ ಆಲಮೇಲ ಪಟ್ಟಣದ ಧನದ ಭಜಾರ ನಿವಾಸಿ ಸುರೇಶ ಹಣಮಂತ ಪೂಜಾರಿ ಮೃತ ಯುವಕನಾಗಿದ್ದಾನೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ ಬಿದ್ದು ಸಾವನ್ನಪ್ಪಿದ್ದು ಕಾರ್ಖಾನೆಯ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲಾ ಎಂದು ಆರೋಪಿ ಮೃತ ಸುರೇಶ ಕುಟುಂಬಸ್ಥರು ಮತ್ತು ವಿವಿಧ ಸಂಘಟನೆಯ ಕಾರ್ಯಕರ್ತರು ಆಲಮೇಲ ಪಟ್ಟಣದ ಅಂಬೇಡ್ಕರ ವ್ರತ್ತದ ಎದುರೂ ಪ್ರತಿಭಟನೆ ನಡೆಸಿದರು. ತಮಿಳು ನಾಡಿನ ಮೂಲದ ಕೆಪಿಆರ್ ಸಕ್ಕರೆ ಕಾರ್ಖಾನೆಯಲ್ಲಿ ಹಲವು ತಿಂಗಳಿAದ ಕೆಲಸ ಮಾಡುತ್ತಿದ್ದ ಸುರೇಶ ಕಾರ್ಖಾನೆಯಲ್ಲೀ ಬಿದ್ದ ಪರಿಣಾಮ ಸೊಲಾಪೂರದ ಖಾಸಗಿ ಆಸ್ಪತ್ರೆಯಲ್ಲೀ ದಾಖಲಿಸಿದರು ಕೂಡಾ ಚಿಕಿತ್ಸೆಗೆ ಸ್ಪಂದಿಸದೇ ಅಸುನಿಗಿದ್ದಾನೆ ಆದರೂ ಕೆಪಿಆರ್ ಆಡಳಿತ ಮಂಡಳಿ ಎತ್ತೆಚ್ಚು ಕಾರ್ಮಿಕ ಸುರೇಶ ಸಾವಿಗೆ ಸ್ಪಂದಿಸದಿದ್ದಕ್ಕೆ ಕುಟುಂಬಸ್ಥರೂ ಆಕ್ರೊಶ ವ್ಯಕ್ತಪಡಿಸಿದರು ಅದಕ್ಕಾಗಿ ಮೃತ ಸುರೇಶ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ವಿವಿಧ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದರು. ನಂತರ ಆಲಮೇಲ ಪಟ್ಟಣದ ಪೊಲಿಸ್ ಠಾಣೆಯ ಪಿಎಸ್ ಐ ನಿಂಗಪ್ಪ ಪೂಜಾರಿ ಪ್ರತಿಭಟನಾ ಸ್ಥಳಕ್ಕೆ ಬೇಡಿ ನೀಡಿ. ಪ್ರತಿಭಟನಾಕಾರರ ಜೊತೆ ಮಾತನಾಡಿದರು.

ವರದಿ. ಬಿ ಎಸ್ ಹೊಸೂರ. ವಿಜಯಪೂರ.

error: