April 18, 2024

Bhavana Tv

Its Your Channel

ಮಾನವ ಹಕ್ಕುಗಳ ಹೋರಾಟಗಾರನ ಬಂಧನವನ್ನು ವಿರೋಧಿಸಿ ರಾಷ್ಟ್ರಪತಿಯವರಿಗೆ ಮನವಿ.

ವಿಜಯಪುರ: ಭಿಮಾಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಮಾನವ ಹಕ್ಕುಗಳ ಹೋರಾಟಗಾರ ೮೨ ವಷ೯ದ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಮೇಲೆ ವಿನಾ:ಕಾರಣ ರಾಷ್ಟ್ರೀಯ ತನಿಖಾ ಸಂಸ್ಥೆ ಸುಳ್ಳು ಆರೋಪ ಗಳನ್ನು ಹೊರಿಸಿ,ಗುರುವಾರ ಬಂಧಿಸಿದ್ದಾರೆ.ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ತಾಲೂಕಿನ ಶಕ್ತಿ ಮಹಿಳಾ ಒಕ್ಕೂಟದ,ದೀಪಾ ಮಹಿಳಾ ಒಕ್ಕೂಟ,ಜ್ಞಾನ ಮಹಿಳಾ ಒಕ್ಕೂಟ,ದಲಿತ ಸಂಘಟನೆಯ ಪದಾಧಿಕಾರಿಗಳು ಸೇರಿಕೊಂಡು ಇಂಡಿ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ ಮುಖಾಂತರ ಮಾನ್ಯ ರಾಷ್ಟ್ರಪತಿಯವರಿಗೆ ಮನವಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಲಾ ಮೇಡಮ್,ಸೈಲಾ ,ಶರಲ್ ಪವಿತ್ರಾ,ರವಿಚಂದ್ರ ಪಾದಗಟ್ಪಿ,ದೇವಕ್ಕಿ ಕಟ್ಟಿಮನಿ,ಶಾರದಾ ಬನಸೋಡೆ,ರಾಜಕುಮಾರ್ ಇಂಗಳಗಿ,ರೇವಣಸಿದ್ಧ,ಮಹಾದೇವ,ಪರಶುರಾಮ ಇತರರು ಭಾಗವಹಿಸಿದರು.

error: