ವಿಜಯಪೂರ: ಜಿಲ್ಲೆಯ ಇಂಡಿ ತಾಲೂಕಿನ ಪತ್ರಕರ್ತ ಧನ್ಯಕುಮಾರ ಧನಶೆಟ್ಟಿ ಅವರಿಗೆ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪತ್ರಕರ್ತರಾದ ಲಾಲಸಿಂಗ್ ರಾಠೋಡ ರಾಜಕುಮಾರ ಚಾಬುಕಸವಾರ ಶಂಕರ ಜಮಾದಾರ ಜೈಭೀಮ ಸಿಂಗೆ ಮಾತನಾಡಿ ನಮ್ಮನ್ನು ಅಗಲಿದ ಧನ್ಯಕುಮಾರ ಧನಶೆಟ್ಟಿ ಅವರ ನಿಧನದಿಂದ ಓರ್ವ ಉತ್ತಮ ಹಿರಿಯ ಪತ್ರಕರ್ತರನ್ನು ಕಳೆದುಕೊಂಡAತಾಗಿದೆ ಭಗವಂತ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಅವರ ಆತ್ಮಕ್ಕೆ ಆ ಭಗವಂತನು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ಧನ್ಯಕುಮಾರ ಧನಶೆಟ್ಟಿಯವರ ಭಾವ ಚಿತ್ರಕ್ಕೆ ಪತ್ರಕರ್ತರಾದ ಲಾಲಸಿಂಗ್ ರಾಠೋಡ. ಅಬುಶಾಮಾ ಹವಾಲ್ದಾರ.ಸದ್ದಾಂ ಜಮಾದಾರ.ಶಿವಾನಂದ ಮಲಕಗೊಂಡ.ಫಯಾಜ ಬಾಗವಾನ.ಅಶೋಕ ಜಾದವ ವಾಸಿಮ್ ಬಾಗವಾನ ಬಿ ಎಸ್ ಹೊಸೂರ ಜೈಭೀಮ ಶಿಂಗೆ.ಮತ್ತಿತರರು ಪುಷ್ಪನಮನವನ್ನು ಸಲ್ಲಿಸಿ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ವರದಿ ಬಿ ಎಸ್ ಹೊಸೂರ.
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ