April 24, 2024

Bhavana Tv

Its Your Channel

ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆಗ್ರಹ

ವಿಜಯಪೂರ: ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಕರೋನಾ ನಿಯಂತ್ರಣಕ್ಕೆ ತಾಲೂಕಾ ಆಡಳಿತ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಉಪವಿಭಾಗಾಧಿಕಾರಿಗಳಾದ ರಾಹುಲ್ ಶಿಂದೆ ಅವರಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿ ಇಂಡಿ ತಾಲೂಕಿನಲ್ಲಿ ಪ್ರತಿದಿನ ೧೦ ರಿಂದ ೧೫ಜನರು ಮರಣ ಹೊಂದುವದು ಸಾಮಾನ್ಯ ವಾಗಿದೆ. ಆದರೆ ಇಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ೪೦ ಬೇಡಗಳಿದ್ದು, ಅನೇಕ ರೋಗಿಗಳು ಚಿಕಿತ್ಸೆ ಸಿಗದೆ ನರಳಿ ನರಳಿ ಸಾಯುತ್ತಿದ್ದಾರೆ .ಕೂಡಲೆ ರಾಜ್ಯ ಸರ್ಕಾರ ಹೆಚ್ಚಿನ ಚಿಕಿತ್ಸೆಗಾಗಿ ಇಂಡಿ ಪಟ್ಟಣದ ಸ್ಟೇಷನ್ ರಸ್ತೆಯ ಸ್ಪಂದನಾ ಆಸ್ಪತ್ರೆಯ ಆಡಳಿತ ಮಂಡಳಿಗಳಿಗೆ ಸಮಸ್ಯೆಯ ಮನವರಿಕೆ ಮಾಡಿ ಕೋವಿಡ ಆಸ್ಪತ್ರೆ ಮಾಡಿ ರೋಗಿಗಳಿಗೆ ಆಕ್ಸಿಜನ್, ಮತ್ತು ವೇಂಟಿಲೇಟರ ಸೌಲಭ್ಯಗಳನ್ನು ಒದಗಿಸಲು ವ್ಯವಸ್ಥೆ ಮಾಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಜು.ಕಾಮಗೋAಡ.ಶ್ರೀಶೈಲಗೌಡ ಪಾಟಿಲ.ಸಿದ್ದು ಡಂಗಾ. ಬಿ ಎಲ್ ರಾಠೋಡ, ಬಾಬು ಮೇತ್ರಿ ಉಪಸ್ಥಿತರಿದ್ದರು

ವರದಿ ಬಿ ಎಸ್ ಹೊಸೂರ.

error: