ಭಟ್ಕಳ: ಆರೋಗ್ಯ ಭಾರತಿ ಭಟ್ಕಳ ಮತ್ತು ಹೊನ್ನಾವರ ಘಟಕದಿಂದ ತಾಲೂಕಿನ ಉತ್ತರ ಕೊಪ್ಪದ ಕೃಷಿ ಗೋ ವಿಕಾಸ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಯೋಗ ಪ್ರಶಿಕ್ಷಣ ವರ್ಗ ಯಶಸ್ವಿಯಾಗಿ ನಡೆಯಿತು.
ಪ್ರಶಿಕ್ಷಣ ವರ್ಗದಲ್ಲಿ ಆಸನ, ಪ್ರಾಣಾಯಾಮ, ಧ್ಯಾನ ವಿಷಯಕ್ಕೆ ಸಂಬAಧಿಸಿ ವಿವಿಧ ಅವಧಿಗಳಲ್ಲಿ ತರಬೇತಿ ನೀಡಲಾಯಿತು.
ಎರಡು ದಿನಗಳ ತರಬೇತಿಯಲ್ಲಿ ದೃಷ್ಟಿ ದೋಷ ನಿವಾರಣೆಗಾಗಿ ತ್ರಾಟಕ ಅಭ್ಯಾಸ, ಮಾನಸಿಕ ಆತಂಕ ನಿವಾರಣೆಗಾಗಿ ಮತ್ತು ಮನಸ್ಸನ್ನು ನೆಮ್ಮದಿಯಾಗಿರಿಸಿಕೊಳ್ಳಲು ಸತ್ಸಂಗ ಭಜನೆ, ವಾತಾವರಣ ಶುದ್ದಿಗೆ ಅಗ್ನಿಹೋತ್ರದ ಮೂಲಕ ಪ್ರಾತ್ಯಕ್ಷತೆಯನ್ನು ಮಾಡಿ ಶಿಭಿರಾರ್ಥಿಗಳಿಗೆ ಮನವರಿಕೆ ಮಾಡಲಾಯಿತು. ಮೈಂಡ್ ಸೌಂಡ್ ರಿಲಾಕ್ಸೇಷನ್ ಟೆಕ್ನಿಕ್ (ಎಂಎಸ್ಆರ್ಟಿ) ತಂತ್ರದಿAದ ದೈಹಿಕ ಆಯಾಸ ನಿವಾರಣೆಗೆ ಸಹಾಯವಾಗುವುದು ಎನ್ನುವುದನ್ನು ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳುವುದರ ಮೂಲಕ ಅರಿತುಕೊಂಡರು.
ಶಿಬಿರದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು, ವ್ಯಾಪಾರಿಗಳು, ಹಿರಿಯರು ಸೇರಿದಂತೆ ಒಟ್ಟೂ ೨೬ ಶಿಭಿರಾರ್ಥಿಗಳು ಇದ್ದರು. ಶಿಕ್ಷಕರಾಗಿ ಡಾ. ಮಂಜುನಾಥ್, ಭುವನ್ ಸುಂದರ್ ಭಾಗವಹಿಸಿದ್ದರು. , ಆರೋಗ್ಯ ಭಾರತೀಯ ಪೂರ್ಣಾವಧಿ ಕಾರ್ಯಕರ್ತ ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.