May 4, 2024

Bhavana Tv

Its Your Channel

ಮಾರುಕೇರಿ ವ್ಯವಸಾಯ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಭಟ್ಕಳ : ಮಾರುಕೇರಿಯ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಶಿವಾನಂದ ಹೆಬ್ಬಾರ ಮೂಡ್ಕೆರೆ ಹಾಗೂ ಉಪಾಧ್ಯಕ್ಷರಾಗಿ ಉದಯಕುಮಾರ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಮಿತ್ರಾಕುಮಾರಿ ಅವರು ಮಂಗಳವಾರ ಮಧ್ಯಾಹ್ನ ಅಧ್ಯಕ್ಷರ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಹಕಾರ ಇಲಾಖೆಯ ಭಾಸ್ಕರ ನಾಯ್ಕ, ಸಂಘದ ನಿರ್ದೇಶಕರಾದ ಶ್ರೀಕಂಠ ಹೆಬ್ಬಾರ, ನಾರಾಯಣ ಹೆಬ್ಬಾರ, ಎಂ ಡಿ ನಾಯ್ಕ, ಹೆಚ್ ಪಿ ರಾಮಮೂರ್ತಿ,ರಾಘವೇಂದ್ರ ಹೆಬ್ಬಾರ, ಗಣೇಶ ಹೆಬ್ಬಾರ, ಮಂಜುನಾಥ ಮೊಗೇರ, ಹೇರಂಭ ಗೊಂಡ, ಲಲಿತಾ ಭಟ್ಟ, ಆಶಾ ಹೆಬ್ಬಾರ, ಸಂಘದ ಮುಖ್ಯಕಾರ್ಯನಿರ್ವಾಹಕ ಶ್ರೀಧರ ಹೆಬ್ಬಾರ ಮುಂತಾದವರಿದ್ದರು. ನೂತನ ಅಧ್ಯಕ್ಷರು-ಉಪಾಧ್ಯಕ್ಷರಿಗೆ ಉಪಸ್ಥಿತರಿದ್ದ ಗಣ್ಯರು ಸೇರಿದಂತೆ ಸಿಬ್ಬಂದಿಗಳು, ನಿರ್ದೇಶಕರು ಶುಭ ಹಾರೈಸಿದರು.

error: