ಶಿರಸಿ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ೩೦ ವರ್ಷ ಭೂಮಿ ಹಕ್ಕು ಹೋರಾಟ- ಒಂದು ಅವಲೋಕನ ಚಿಂತನ ಕೂಟವನ್ನ ದಿನಾಂಕ ಸಪ್ಟೆಂಬರ್, ೧೨ ಮುಂಜಾನೆ ೧೦:೩೦ ಕ್ಕೆ ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಸದ್ರಿ ಕಾರ್ಯಕ್ರಮವನ್ನು ಮಾನ್ಯ ಶ್ರೀ ಕಾಗೋಡ ತಿಮ್ಮಪ್ಪ ಸಾಮಾಜಿಕ ಚಿಂತಕರು ಉದ್ಘಾಟಿಸಲಿದ್ದು, ರಾಜ್ಯ ಹೋರಾಟ ಸಮಿತಿ ಪದಾಧಿಕಾರಿಗಳಾದ ರಮೇಶ ಹೆಗಡೆ ಆಗುಂಬೆ, ತಿ.ನ.ಶ್ರೀನಿವಾಸ ಸಾಗರ, ಪ್ರಜಾಶಕ್ತಿ ಬೋರಯ್ಯ ಚಿತ್ರದುರ್ಗ, ರಾಮ ಕೆ ಕೊಡಗು, ಕುಮಾರ ಸಮತಲ ಕೊಪ್ಪಲ, ಕಂಸುಸಾಬ ಸಿದ್ಧಿ ಧಾರವಾಡ, ಶಂಕರ ಗದಗ, ಪಂಪಾವತಿ ಬಳ್ಳಾರಿ, ಕುಬೇರಪ್ಪ ಹಾವೇರಿ ಮುಂತಾದವರು ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅವಲೋಕನ ಚಿಂತನ ಕೂಟದಲ್ಲಿ ಭಾಗವಹಿಸಬೇಕಾಗಿ ಕೋರಿಕೆ.
ಸದ್ರಿ ಸಭೆಯಲ್ಲಿ ೩೦ ವರ್ಷ ಹೋರಾಟದ ಅವಲೋಕನ, ಮುಂದಿನ ಹೋರಾಟದ ರೂಪುರೇಷೆ ಹಾಗೂ ಸಂಘಟನೆಗೆ ಹೊಸ ಅಧ್ಯಕ್ಷ ಆಯ್ಕೆ ಕುರಿತು ಚಿಂತಿಸಿ ಕಾರ್ಯರೂಪ ನಿರೂಪಿಸಲಾಗುವುದೆಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ