March 12, 2025

Bhavana Tv

Its Your Channel

ಸಿದ್ದಾರ್ಥ ಎಜ್ಯುಕೇಶನ್ ಟ್ರಷ್ಟ(ರಿ) ಭಟ್ಕಳ, ದಶಮಾನೋತ್ಸವ ಸಂಭ್ರಮ, ಉದ್ಘಾಟಣೆ ನೇರವೇರಿಸಿದ ಮಾನ್ಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ.. ಉತ್ತರ ಕನ್ನಡ ಉಸ್ತುವಾರಿ ಸಚಿವರು

ಭಟ್ಕಳ: ಗ್ರಾಮೀಣ ಭಾಗವೊಂದರಲ್ಲಿ ಕಳೆದ ಹತ್ತು ವರ್ಷಗಳಿಂದ ಉತ್ತಮ ಶಿಕ್ಷಣ ನೀಡಿ ಸಾಧನೆ ತೋರಿರುವ ಭಟ್ಕಳದ ಸಿದ್ದಾಥ್ ಕಾಲೇಜಿನ ಶ್ರೇಯಸ್ಸಿಗೆ ಅಭಿನಂದನೆ ಸಲ್ಲಿಸುವದಾಗಿ ಉ,ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ತಿಳಿಸಿದರು.

ಅವರು ತಾಲ್ಲೂಕಿನ ಶಿರಾಲಿಯಲ್ಲಿ ನಡೆದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ದಶಮನೋತ್ಸವ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು. ಕರೋನಾ ಮಹಾಮಾರಿ ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ಆರ್ಥಿಕ ಹೊಡೆತ ನೀಡಿದೆ. ಇಂತಹ ಸನ್ನಿವೇಶದಲ್ಲೂ ಸಿದ್ದಾರ್ತ ಶಿಕ್ಷಣ ಸಂಸ್ಥೆ ಉತ್ತಮ ಸಾಧನೆ ತೋರಿದೆ ಎಂದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ಶಾಸಕ ಸುನೀಲ ನಾಯ್ಕರವರು ಮಾತನಾಡಿ ಶಿರಾಲಿ ಪುಟ್ಟ ಕಟ್ಟಡದಲ್ಲಿ ಆರಂಭವಾದ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಇಂದು ಜಿಲ್ಲೆಯಲ್ಲಿಯೇ ಮಾದರಿಯಾಗಿ ಬೆಳೆದಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ ಡಿ ನಾಯ್ಕ, ಬಿಜೆಪಿ ಮುಖಂಡ ಗೋವಿಂದ ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷ ಸುಬ್ರಾಯ ನಾಯ್ಕ, ಹೊನ್ನಾವರ ಅರ್ಬನ್ ಬ್ಯಾಂಕ ಜನರಲ್ ಮೇನೆಜರ್ ರಾಜೀವ್ ಶ್ಯಾನಭಾಗ, ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ರೇವತಿ ಆರ್ ನಾಯ್ಕ, ಸಂಸ್ಥೇಯ ಕಾರ್ಯದರ್ಶಿ ಅಶೋಕಕುಮಾರ್ ಶೆಟ್ಟಿ, ಶ್ರೀಧರ ನಾಯ್ಕ ಮುಂತಾಧವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ ಆರೋಗ್ಯಾಧಿಕಾರಿ ಈರಯ್ಯ ದೇವಾಡಿಗರವರನ್ನು ಸನ್ಮಾನಿಸಲಾಯಿತು. ಸಂಸ್ಥೇಯ ಕಾರ್ಯದರ್ಶಿ ಅರ್ಚನಾ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥನ ಗೀತೆ ಹಾಡಿದರು.

error: